ಭಾರತ, ಮೇ 5 -- ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಸಾಧಾರಣ ಫಲಿತಾಂಶ ದಾಖಲಾಗಿದೆ. ತೇರ್ಗಡೆಯಾದ ವಿದ್ಯಾರ್ಥಿಗಳು ಮುಂದಿನ ಶಿಕ್ಷಣದ ಬಗ್ಗೆ ಯೋಚನೆ ಮಾಡುತ್ತಿದ್ದರೆ, ಅನುತ್ತೀರ್ಣರಾದ ವಿದ್ಯಾರ್ಥಿಗಳು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಪರೀಕ್ಷೆಯಲ್ಲಿ ಫೇಲ್ ಆದ ಮಾತ್ರಕ್ಕೆ ಎಲ್ಲವೂ ಮುಗಿಯಿತು ಎಂದಲ್ಲ. ಅನುತ್ತೀರ್ಣರಾದ ವಿದ್ಯಾರ್ಥಿಗಳ ಮುಂದೆಯೂ ಹಲವು ದಾರಿಗಳಿವೆ. ಅದರಲ್ಲಿ ಸೂಕ್ತ ಹಾದಿಯನ್ನು ಆಯ್ಕೆ ಮಾಡಿ ಮುನ್ನಡೆಯುವುದು ಅವರವರಿಗೆ ಬಿಟ್ಟ ನಿರ್ಧಾರ. ನೀವೇನಾದ್ರೂ 10ನೇ ತರಗತಿ ಫೇಲ್‌ ಅಥವಾ ಪಾಸ್‌ ಆಗಿಯೂ ಮುಂದೇನು ಎಂಬ ನಿರ್ಧಾರಕ್ಕೆ ಬರದಿದ್ದರೆ, ಈ ಸಲಹೆ ನಿಮಗೆ ನೆರವಾಗಬಹುದು.

ಸಾಮಾನ್ಯವಾಗಿ ಈಗಿನ ಮಕ್ಕಳಿಗೆ ಮೊಬೈಲ್‌ ಕುರಿತು ಆಸಕ್ತಿ ಹೆಚ್ಚು. ಪುಸ್ತಕದ ಓದು ತಲೆಗೆ ಸಲಭವಾಗಿ ಹತ್ತದಿದ್ದರೂ, ಮೊಬೈಲ್‌ನಲ್ಲಿ ಬರುವ ಎಲ್ಲಾ ಅಂಶಗಳು ಬೇಗನೆ ಅರ್ಥವಾಗುತ್ತವೆ. ಅದರ ರಿಪೇರಿ, ಸೆಟ್ಟಿಂಗ್‌ ಹಾಗೂ ಸಾಫ್ಟ್‌ವೇರ್‌ ಬಗ್ಗೆಯೂ ಆಸಕ್ತಿ ಇರುತ್ತದೆ. ಇಂಥವರು 10ನೇ ತರಗತಿ ಪರೀಕ್ಷೆ...