Bangalore, ಮೇ 4 -- ಎಸ್ಎಸ್ಎಲ್ಸಿ ಟಾಪರ್ ಸಂದರ್ಶನ: ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ಬಾರಿ ರಾಜ್ಯಕ್ಕೆ ಟಾಪರ್ ಆಗಿ ಶಿವಮೊಗ್ಗದ ಪ್ರಿಯಾದರ್ಶಿನಿ ಹೈಸ್ಕೂಲ್ ವಿದ್ಯಾರ್ಥಿನಿ ನಮನಾ ಕೆ. ಹೊರಹೊಮ್ಮಿದ್ದಾರೆ. ಈಕೆಯ ಯಶಸ್ಸಿನ ಹಿಂದೆ ಟೀಚರ್ಗಳು ಮಾತ್ರವಲ್ಲದೆ ಅಪ್ಪ ಉಪತಹಶಿಲ್ದಾರ್ ಕೃಷ್ಣಮೂರ್ತಿ ಎಚ್, ತಾಯಿ ಪದ್ಮಿನಿ ಸಿ. ಮಾತ್ರವಲ್ಲದೆ ಸಹೋದರನ ಬೆಂಬಲವೂ ಇದೆ.
"ಕಷ್ಟವೆನಿಸುವ ವಿಷಯಗಳನ್ನು ಶಾಲಾ ಆರಂಭದ ದಿನಗಳಿಂದಲೇ ಹೆಚ್ಚು ಓದುತ್ತಿದ್ದೆ. ಬೆಳಗ್ಗೆ ಮತ್ತು ರಾತ್ರಿಯೂ ಇಂತಹ ವಿಷಯಗಳ ಕಡೆಗೆ ಹೆಚ್ಚು ಗಮನ ನೀಡುತ್ತ ಇದ್ದೆ. ಶಾಲೆಯಲ್ಲಿಯೂ ನನಗೆ ಕಷ್ಟವೆನಿಸುವ ವಿಷಯಗಳ ಕುರಿತು ಟೀಚರ್ಸ್ ಬಳಿ ಕೇಳಿ ಡೌಟ್ ಬಗೆಹರಿಸಿಕೊಳ್ಳುತ್ತಿದ್ದೆ" ಎಂದು ನಮನಾ ಹೇಳಿದ್ದಾರೆ.
"ಶಾಲೆಯ ಆರಂಭದ ದಿನಗಳಿಂದಲೂ ಬೆಳಗ್ಗೆ 4.30 ಗಂಟೆಗೆ ಎದ್ದು ಓದುವ ಅಭ್ಯಾಸ ಬೆಳೆಸಿಕೊಂಡಿದ್ದೆ. ಬೆಳಗ್ಗೆ 7.30ರ ತನಕ ಓದುತ್ತಿದ್ದೆ. ಸಂಜೆ 6.30ರಿಂದ 9 ತನಕ ಓದುತ್ತಿದ್ದೆ. ಆಮೇಲೆ ಊಟ ಮಾಡಿ, ಹತ್ತು ಗಂಟೆಯಿಂದ 12.30 ಗಂಟೆಯ ...
Click here to read full article from source
To read the full article or to get the complete feed from this publication, please
Contact Us.