Bangalore, ಮೇ 3 -- ಬೆಂಗಳೂರು: ನಾನು ಹೆಚ್ಚು ಎಲ್ಲಾ ವಿಷಯಗಳನ್ನು ಓದುತ್ತಿರಲಿಲ್ಲ. ಒಂದೊಂದು ವಿಷಯವನ್ನು ಇಂತಿಷ್ಟೇ ಸಮಯ ಓದಲೇಬೇಕು ಎಂದು ಗುರಿ ನಿಗದಿಪಡಿಸಿಕೊಂಡೂ ಅಭ್ಯಾಸ ಮಾಡುತ್ತಿರಲಿಲ್ಲ. ನಿತ್ಯ ಐದಾರು ಗಂಟೆಯ ಸಮಯವನ್ನು ಓದಿಗೆ ಮೀಸಲಿಡುತ್ತಿದ್ದೆ. ಆ ಸಮಯವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡೆ. ಹೆಚ್ಚು ಹೆಚ್ಚು ಸಮಯ ಕೊಟ್ಟು ಓದುವುದಕ್ಕಿಂತ ಓದಿದ ಸಮಯವನ್ನೇ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಪರಿಣಾಮಕಾರಿಯಾಗಿ ಓದಿದರೆ ಯಾವುದೇ ಪರೀಕ್ಷೆಯನ್ನು ಪಾಸು ಮಾಡಬಹುದು. ಎಂಥದ್ದೇ ಕಠಿಣ ವಿಷಯವನ್ನು ಗೆಲ್ಲಬಹುದು. ಇದು ನನ್ನ ಮೂರು ವರ್ಷದ ಶಿಕ್ಷಣ ಜೀವನದ ಅನುಭವ. ಅದರಲ್ಲೂ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಇದೇ ನೀತಿ ನನ್ನ ಕೈಹಿಡಿಯಿತು. 625 ಕ್ಕೆ 625 ಅಂಕ ಪಡೆದು ಟಾಪರ್‌ ಆಗಲು ನೆರವಾಯಿತು.

ಇವು ಬೆಂಗಳೂರು ಉತ್ತರ ವಲಯದ ಮಾಗಡಿ ಮುಖ್ಯ ರಸ್ತೆ ವಿಶ್ವನೀಡಂನ ಕೆಂಪೇಗೌಡ ನಗರದಲ್ಲಿರುವ ಸೆಂಟ್‌ ಯಶ್‌ ಶಾಲೆಯಲ್ಲಿ ಓದಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಸಂಪೂರ್ಣ ಅಂಕ ಪಡೆದಿರುವ ಧನಲಕ್ಷ್ಮಿ ಯಶಸ್ಸಿನ ಹಿಂದಿನ ನುಡಿ...