ಭಾರತ, ಏಪ್ರಿಲ್ 19 -- ನನಗೆ ದೊರೆತ ಶ್ರೀಯುತರ ಜನನದ ವೇಳೆ ಮತ್ತು ದಿನಾಂಕವನ್ನು ಆಧರಿಸಿ ಈ ಕೆಳಕಂಡ ಅಂಶಗಳನ್ನು ಬರೆದಿದ್ದೇನೆ. ಇದರಿಂದ ಯಾರ ಮನಸ್ಸನ್ನೂ ನೋಯಿಸುವ ಅಥವಾ ಇಲ್ಲದ ಭರವಸೆಗಳನ್ನು ಸೃಷ್ಟಿಸುವ ಆಸೆ ನನಗಿಲ್ಲ. ಪ್ರತಿಯೊಬ್ಬರೂ ಕ್ಷೇಮದಿಂದ ಇರಬೇಕೆಂಬುದೇ ನನ್ನ ಆಶಯ. ದೊರೆತ ಮೂಲಗಳ ಪ್ರಕಾರ ಇವರ ಜನ್ಮ ದಿನಾಂಕ 16-12-1959. ಜನನದ ಸಮಯ ಸಂಜೆ 06.08. ಹಾಸನದಲ್ಲಿ ಜನನ.

ಇವರ ಜಾತಕದಲ್ಲಿ ಕುಜ ಮತ್ತು ಶ್ರುಕ್ರರು ಸದೃಢರಾಗಿದ್ದಾರೆ. ದ್ವಿತೀಯ ಭಾಗದ ಅಧಿಪತಿ ಚಂದ್ರನು ಲಗ್ನದಲ್ಲಿದೆ. ಲಗ್ನವು ಮಿಥುನವಾಗಿದೆ. ಮಾತಿನ ಮೇಲೆ ಹತೋಟಿ ಸಾಧಿಸುತ್ತಾರೆ. ಒಂದೇ ರೀತಿಯ ಕೆಲಸ ಕಾರ್ಯಗಳನ್ನು ಇವರು ಇಷ್ಟ ಪಡುವುದಿಲ್ಲ. ಇವರಿಗೆ ಸ್ಥಿರವಾದ ಮನಸ್ಸಿರುವುದಿಲ್ಲ. ಕ್ಷಣಮಾತ್ರದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಬದಲಿಸುತ್ತಾರೆ. ಇವರಿಗೆ ಕೋಪ ಬರುವುದು ಬಲು ಕಡಿಮೆ. ಆದರೆ ಕೋಪಗೊಂಡಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇವರ ನೇರ ನಿಷ್ಠುರದ ನಡೆ ನುಡಿ ವಿವಾದಕ್ಕೆ ಕಾರಣವಾಗುತ್ತದೆ. ಮೊದಲ ಪ್ರಾಮುಖ್ಯತೆ ಸ್ವ...