ಭಾರತ, ಮೇ 16 -- ಬೆಂಗಳೂರು: ಸದ್ಯ ಭಾರತ- ಪಾಕಿಸ್ತಾನ ನಡುವೆ ಬಿಕ್ಕಟ್ಟು ತೀವ್ರಗೊಂಡಿದ್ದು, ಯುದ್ಧ ಪರಿಸ್ಥಿತಿಯ ಸನ್ನಿವೇಶ. ಸರ್ಕಾರವೂ ಮಾಧ್ಯಮ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹೀಗಿರುವಾಗ, ಪತ್ರಕರ್ತರ ವಿವೇಕ ಜಾಗೃತವಾಗಬೇಕು. ಯುದ್ಧ ಸಂದರ್ಭದಲ್ಲಿ ದೇಶವೇ ಮೊದಲು. ನಮ್ಮ ದೇಶ, ನಮ್ಮ ನೆಲ, ನಮ್ಮ ಜನ ಉಳಿಯಬೇಕು ಎಂಬುದಕ್ಕೇ ಆದ್ಯತೆ. ವಸ್ತು ನಿಷ್ಠ ವರದಿಗಾರಿಕೆಗೆ ಅಲ್ಲ ಎಂದು ಹಿರಿಯ ಪತ್ರಕರ್ತ ಎಚ್ ಆರ್ ಶ್ರೀಶ ಹೇಳಿದರು.

ಹಿರಿಯ ಪತ್ರಕರ್ತ ಎಚ್ ಆರ್ ಶ್ರೀಶ ಅವರು ಗುರುವಾರ (ಮೇ 15) ಹಿಂದೂಸ್ತಾನ್ ಟೈಮ್ಸ್ ಕನ್ನಡ ಸಂವಾದ ಕಾರ್ಯಕ್ರಮದಲ್ಲಿ "ಯುದ್ಧ ಮತ್ತು ಮಾಧ್ಯಮ" ವಿಷಯದ ಕುರಿತು ತಮ್ಮ ಅನುಭವ ಹಂಚಿಕೊಳ್ಳುತ್ತ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಅವರ ಮಾತುಗಳಲ್ಲಿ ಗಮನಸೆಳೆದ ಅಂಶಗಳಿವು

1) ಯುದ್ಧ ಸಂದರ್ಭದಲ್ಲಿ ಯುದ್ಧೋನ್ಮಾದ ವ್ಯಾಪಕವಾಗಿರುತ್ತದೆ. ಬಹುತೇಕರ ಆಲೋಚನೆಗಳು ಇಸಂಗೆ ಒಳಗಾಗಿ ವಸ್ತುನಿಷ್ಠ, ಸಮಚಿತ್ತದ ಭಾವ ಕಳೆದು ಹೋಗಿರುತ್ತದೆ.

2) ದೇಶ, ಭಾಷೆ, ನಲೆ, ಜಲದ ವಿಚಾರ ಬಂದಾಗ ಚಿಂತನೆಗಳ ಮೇಲೆ ಭಾವನಾತ...