Bengaluru, ಮೇ 6 -- ಸ್ಯಾಂಡಲ್‌ವುಡ್‌ ರಿಯಲ್‌ ಸ್ಟಾರ್‌ ಉಪೇಂದ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ, ಅಭಿಮಾನಿ ವಲಯದಲ್ಲಿ ಆತಂಕ ಶುರುವಾಗಿತ್ತು. ಅಜೀರ್ಣ, ಗ್ರ್ಯಾಸ್‌ಟ್ರಿಕ್‌, ಲೋ ಬಿಪಿಯಿಂದಾಗಿ ಉಪೇಂದ್ರ ಆಸ್ಪತ್ರೆ ಸೇರಿದ್ದರು. ನೆಚ್ಚಿನ ನಟರು ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ ಎಂದರೆ ಅವರ ಫ್ಯಾನ್ಸ್‌ ವಲಯದಲ್ಲಿ ಸಹಜವಾಗಿ ಆತಂಕ ಸೃಷ್ಟಿಯಾಗುತ್ತದೆ. ಅದೇ ರೀತಿ ಸೋಮವಾರ ಆಸ್ಪತ್ರೆಗೆ ಆಗಮಿಸಿದ್ದ ಉಪೇಂದ್ರ, ಎಂದಿನಂತೆ ರೆಗ್ಯುಲರ್‌ ಚಕ್‌ಅಪ್‌ ಮಾಡಿಸಿಕೊಂಡು, ಆಸ್ಪತ್ರೆಯಿಂದ ಮರಳಿದ್ದಾರೆ.

ಸೋಮವಾರ ನಟ ಉಪೇಂದ್ರ ಅವರಿಗೆ ಆಸಿಡಿಟಿ ಸಮಸ್ಯೆ ಎದುರಾಗಿತ್ತು. ಆ ಹಿನ್ನೆಲೆಯಲ್ಲಿ ತಕ್ಷಣ ಪತ್ನಿಯೊಂದಿಗೆ ಬೆಂಗಳೂರಿನ ಸದಾಶಿವನಗರದ ಬಳಿಯ ಖಾಸಗಿ ಆಸ್ಪತ್ರೆಗೆ ದೌಡಾಯಿಸಿದ್ದರು. ಇದೀಗ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಉಪೇಂದ್ರ ಡಿಸ್ಚಾರ್ಜ್‌ ಆಗಿದ್ದಾರೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ನಟ ಉಪೇಂದ್ರ, ಈ ಬಗ್ಗೆ ಅವರ ಅಭಿಮಾನಿ ಬಳಗಕ್ಕೂ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಹರಿದಾಡಿದ ...