ಭಾರತ, ಏಪ್ರಿಲ್ 20 -- ಭಾರತದಲ್ಲಿ ಸೆಲೆಬ್ರಿಟಿಗಳ ದೇವಸ್ಥಾನಗಳು: ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ತನಗೆ ಬದರಿನಾಥದಲ್ಲಿ ದೇಗುಲವಿದೆ ಎಂದು ಹೇಳಿ ಸುದ್ದಿಯಾಗಿದ್ದರು. ಉತ್ತರಾಖಂಡದಲ್ಲಿ ಈಕೆಗೆ ಯಾವುದೇ ದೇಗುಲವಿಲ್ಲ ಎಂದು ತಿಳಿದ ಬಳಿಕ ಟ್ರೋಲ್‌ಗೆ ಒಳಗಾಗಿದ್ದರು. ಬದರಿನಾಥದ ಆರ್ಚಕರು, ಧಾರ್ಮಿಕ ಅಧಿಕಾರಿಗಳು ಈಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ನಟಿ ಊರ್ವಶಿ ರೌಟೇಲಾ ಅವರಿಗೆ ದೇಗುಲ ಇಲ್ಲದೆ ಇರಬಹುದು. ಆದರೆ, ಭಾರತದ ಅನೇಕ ನಟರು, ನಟಿಯರಿಗೆ ಅವರ ಅಭಿಮಾನಿಗಳು, ಆಪ್ತರು ದೇಗುಲಗಳನ್ನು ನಿರ್ಮಿಸಿದ್ದಾರೆ. ಕರ್ನಾಟಕದಲ್ಲಿ‌ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಹಾವೇರಿಯಲ್ಲಿ ದೇಗುಲ ನಿರ್ಮಿಸಿದ್ದಾರೆ. ದಿವಂಗತ ಲೀಲಾವತಿಯವರಿಗೆ ಅವರ ಮಗನೇ ನಿಂತು ದೇಗುಲ ನಿರ್ಮಿಸಿದ್ದಾರೆ. ರಜನಿಕಾಂತ್‌ಗೂ ದೇಗುಲವಿದೆ. ಬನ್ನಿ ಭಾರತದ ಸೆಲೆಬ್ರಿಟಿಗಳ ದೇಗುಲಗಳ ವಿವರ ಪಡೆಯೋಣ

ಪುನೀತ್‌ ರಾಜ್‌ಕುಮಾರ್‌ ದೇಗುಲ: ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ನೆನಪಿನಲ್ಲಿ ಅವರ ಅಭಿಮಾನಿಗಳು ಹಾವೇರಿ ಜಿಲ್ಲೆಯ ಯಲಗಚ್ಚ ಗ್ರ...