ಭಾರತ, ಜೂನ್ 16 -- ಹಿಂದೂ ಧರ್ಮದಲ್ಲಿ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ಸಲಹೆಗಳನ್ನು ನೀಡಲಾಗಿದೆ. ಅವುಗಳಲ್ಲಿ ವಾಸ್ತು ಶಾಸ್ತ್ರವು ಒಂದು. ಜೀವನದಲ್ಲಿ ಸುಖ ಸಂತೋಷ ತುಂಬಿರಬೇಕೆಂದರೆ ವ್ಯಕ್ತಿ ವಾಸಿಸುವ ನೆಲೆ ಸರಿಯಾಗಿರಬೇಕು. ಅಂದರೆ ವಾಸ್ತು ಶಾಸ್ತ್ರದಲ್ಲಿ ಹೇಳಿರುವ ನಿಯಮಗಳನ್ನು ಪಾಲಿಸಬೇಕು. ಅದರಿಂದ ಜೀವನದಲ್ಲಿ ಧನಾತ್ಮಕತೆ ನೆಲೆಸುತ್ತದೆ. ಅದೇ ವಾಸ್ತುವನ್ನು ಪಾಲಿಸದಿದ್ದರೆ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದಕ್ಕೆ ನಾವು ಊಟ ಮಾಡುವ ಡೈನಿಂಗ್‌ ಟೇಬಲ್‌ ಕೂಡಾ ಸೇರಿದೆ. ಮನೆಯಲ್ಲಿ ಡೈನಿಂಗ್‌ ಟೇಬಲ್‌ ಇದ್ದು, ಅದನ್ನು ತಪ್ಪು ಜಾಗದಲ್ಲಿ ಇರಿಸಿದ್ದರೆ ಆಗ ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೇ ಡೈನಿಂಗ್‌ ಟೇಬಲ್‌ ಮೇಲೆ ಇಡಲೇಬಾರದಂತಹ ವಸ್ತುಗಳನ್ನು ಇಟ್ಟಿದ್ದರೂ ಕೂಡಾ ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಕುಟುಂಬದ ಸದಸ್ಯರ ಆರೋಗ್ಯ ಹದಗೆಡುತ್ತದೆ. ಆರ್ಥಿಕ ತೊಂದರೆಗಳು ಕಾಣಿಸಿಕೊಳ್ಳಬಹುದು. ನಿಮ್ಮ ವೃತ್ತಿ ಜೀವನ ಹಾಗೂ ವೈವಾಹಿಕ ಜೀವನದಲ್ಲೂ ಏರಿಳಿತಗಳನ್ನು ಎದುರಿಸಬೇಕಾಗಬಹು...