Bengaluru, ಮೇ 19 -- ಪುಷ್ಕರ ಕುಂಭದಲ್ಲಿ ಪುಣ್ಯ ಸ್ನಾನಕ್ಕಾಗಿ ನೂರಾರು ಮಂದಿ ಭಕ್ತರು ಭಾನುವಾರು (ಮೇ 18) ಕೇಶವ ಪ್ರಯಾಗದಲ್ಲಿ ಜಯಾಸಿದ್ದಾರೆ. ಉತ್ತರಾಖಂಡ್ ನ ಚೋಮಲಿ ಜಿಲ್ಲೆಯ ಗಡಿ ಗ್ರಾಮವಾದ ಮಾನಾ ಸಮೀಪದ ಕೇಶವ್ ಪ್ರಯಾಗ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. 12 ವರ್ಷಗಳ ಬಳಿಕ ಈ ಪುಷ್ಕರ ಕುಂಭ ನಡೆಯುತ್ತಿದೆ.

ಉತ್ತರಾಖಂಡ್ ಸಿಎಂ ಕಚೇರಿಯ ಮಾಹಿತಿ ಪ್ರಕಾರ, ಅಲಕಾನಂದ ಮತ್ತು ಸ್ವರಸ್ವತಿ ನದಿಗಳಲ್ಲಿ ಸಂಗಮವಾದ ಕೇಶವ್ ಪ್ರಯಾಗ್ ನಲ್ಲಿ ಮೇ 14 ರಿಂದ 26 ರವರೆಗೆ ಆಯೋಜಿಸಿರು ಪುಷ್ಕರ ಕುಂಭದಲ್ಲಿ ಈಗಾಗಲೇ ಸಾವಿರಾರು ಮಂದಿ ಪುಣ್ಯ ಸ್ನಾನ ಮಾಡಿದ್ದಾರೆ. ದಕ್ಷಿಣ ಭಾರತದಿಂದ ಹೆಚ್ಚು ಭಕ್ತರು ಪುಣ್ಯ ಸ್ನಾನಕ್ಕಾಗಿ ಇಲ್ಲಿಗೆ ಆಗಮಿಸುತ್ತಿರುವುದು ವಿಶೇಷ ಎಂದು ಸಿಎಂಒ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.

ಬದರೀನಾಥ ಧಾಮದ ಬಳಿಯ ಭಾರತದ ಮೊದಲ ಗ್ರಾಮವಾದ ಮಾನಾದಲ್ಲಿ 12 ವರ್ಷಗಳ ನಂತರ ಪುಷ್ಕರ್ ಕುಂಭ ಆರಂಭವಾಗಿದೆ. ಇದು ನಂಬಿಕೆಯ ಮಹಾನ್ ಹಬ್ಬವಾಗಿದ್ದು, ನಮ್ಮ ಶಾಶ್ವತ ಸಂಪ್ರದಾಯಗಳ ದೈವತ್ವದ ಜೀವಂತ ಉ...