Bangalore, ಮೇ 15 -- ಬೆಂಗಳೂರು: ಈ ವರ್ಷ ಉತ್ತಮ ಮುಂಗಾರು ಮಳೆ ಆಗಲಿದೆ ಎಂಬ ಸುದ್ದಿ ಕೃಷಿಕ ಸಮುದಾಯಕ್ಕೆ ಹರ್ಷವನ್ನುಂಟು ಮಾಡಿದೆ. ಈ ವರ್ಷವಾದರೂ ವೇಳೆ ಬೆಳೆದು ಕೈ ತುಂಬಾ ಹಣ ನೋಡಬಹುದೆಂಬ ಆಸೆ ಅವರದ್ದು. ಜತೆಜತೆಗೆ ಬಿತ್ತನೆ ಕಾರ್ಯ ಆರಂಭಿಸಲು ಸಾಕಷ್ಟು ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಿಗಲಿದೆಯೇ ಎಂಬಾ ಆತಂಕವೂ ಅವರಲ್ಲಿ ಮನೆ ಮಾಡಿದೆ. ಜೂನ್‌ ನಿಂದ ಅಕ್ಟೋಬರ್‌ ವರೆಗೆ ಬರುವ ನೈಋತ್ಯ ಮಳೆ ಸರಾಸರಿಗಿಂತ ಶೇ.104 ರಷ್ಟು ಅಧಿಕವಾಗಿರಲಿದ್ದು ಒಂದು ವಾರ ಮುಂಚಿತವಾಗಿಯೇ ರಾಜ್ಯವನ್ನು ಪ್ರವೇಶಿಸಲಿದೆ.ಮಳೆ ಮುಂಚಿತವಾಗಿ ಆಗಮಿಸಲಿದೆ ಎಂಬ ಕಾರಣಕ್ಕೆ ರೈತರು ಈಗಿನಿಂದಲೇ ಬಿತ್ತನೆ ಬೀಜಮತ್ತು ರಸಗೊಬ್ಬರ ಸಂಗ್ರಹಕ್ಕೆ ಮುಂದಾಗಿದ್ದಾರೆ. ಉತ್ತಮ ಮಳೆಯಾಗುವ ಕಾರಣಕ್ಕೆ ಈ ವರ್ಷ ಬಿತ್ತನೆಯಾಗುವ ಪ್ರದೇಶ ಕಳೆದ ವರ್ಷಕ್ಕಿಂತ ಶೇ. 7 ರಷ್ಟು ಹೆಚ್ಚಾಗಲಿದೆ.

ಅಂದರೆ ಕಳೆದ ವರ್ಷ 107 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆಯಾಗಿದ್ದರೆ ಈ ವರ್ಷ ಹಿಂಗಾರು ಮುಂಗಾರು ಎರಡೂ ಸೇರಿ 114.5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗು...