Bengaluru, ಜೂನ್ 7 -- ದಿನಕರ: ದಾತು ಆರೋಗ್ಯಂ ಎಂಬ ಮಾತಿದೆ. ಅಂದರೆ ಸೂರ್ಯನಿಂದ ನಮಗೆ ಉತ್ತಮ ಆರೋಗ್ಯ ದೊರೆಯುತ್ತದೆ. ಆದರೆ ಕೇವಲ ಆರೋಗ್ಯವಲ್ಲದೆ ಸಮಾಜದಲ್ಲಿ ಉತ್ತಮ ಕೀರ್ತಿ ಪ್ರತಿಷ್ಠೆ ದೊರೆಯುವುದೂ ಸೂರ್ಯನ ಪೂಜೆಯಿಂದಲೆ. ಮನೆತನದ ಆಸ್ತಿಯ ವಿಚಾರದಲ್ಲಿನ ವಾದ ವಿವಾದಗಳು ಸಹ ಸೂರ್ಯನಿಂದ ತಿಳಿಯಬಹುದು. ಸೂರ್ಯನ ಪೂಜೆಯಿಂದ ತಂದೆಯ ಜೊತೆಯಲ್ಲಿ ಉತ್ತಮ ಅನುಬಂಧ ಇರುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಹೊಂದಾಣಿಕೆ ಏರ್ಪಡುತ್ತದೆ. ಆದರೆ ಪ್ರತಿಯೊಂದು ರಾಶಿಗಳಿಗೂ ಪ್ರತ್ಯೇಕವಾದ ಫಲಗಳು ದೊರೆಯುತ್ತವೆ.

ಸೂರ್ಯದೇವರನ್ನು ಆರಾಧಿಸಲು ಅನೇಕವಾದ ಮಾರ್ಗಗಳಿವೆ. ಇದರಿಲ್ಲಿನ ಸುಲಭವಾದ ಮಾರ್ಗ ಎಂದರೆ ಸೂರ್ಯ ನಮಸ್ಕಾರ. ಸೂರ್ಯನಮಸ್ಕಾರದಿಂದ ದೈಹಿಕ ಶಕ್ತಿಯು ಹೆಚ್ಚುತ್ತದೆ. ಆತ್ಮವಿಶ್ವಾಸವನ್ನು ಗಳಿಸಲು ಸಾಧ್ಯವಾಗುತ್ತದೆ. ಸೂರ್ಯೋದಯದ ವೇಳೆಯಲ್ಲಿ ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ದೇಹದಲ್ಲಿನ ಸೋಂಕು ಸಹ ಮರೆಯಾಗುತ್ತದೆ. ಮೇಷ, ಸಿಂಹ, ವೃಶ್ಚಿಕ ಮತ್ತು ಧನg ರಾಶಿಗಳಿಗಳು ಮತ್ತು ಲಗ್ನದಲ್ಲಿ ಜನಿಸಿರುವವರಿಗೆ ಸೂರ...