ಭಾರತ, ಮೇ 13 -- ರಕ್ತದಾನ ಮಹಾದಾನ ಎನ್ನುವ ಮಾತು ನೀವು ಕೇಳಿರಬಹುದು. ವರ್ಷಕ್ಕೊಮ್ಮೆಯಾದ್ರೂ ರಕ್ತದಾನ ಮಾಡಬೇಕು, ಇದು ಆರೋಗ್ಯ ದೃಷ್ಟಿಯಿಂದಲೂ ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಕೆಲವರು ಪ್ರತಿ ವರ್ಷ ತಪ್ಪದೇ ರಕ್ತದಾನ ಮಾಡುತ್ತಾರೆ. ನಾವು ನೀಡುವ ರಕ್ತವು ಇನ್ಯಾವುದೋ ಜೀವ ಉಳಿಸಲು ನೆರವಾಗಬಹುದು. ಆದರೆ ಇತ್ತೀಚೆಗೆ ರಾಜ್ಯದ ಕೆಲ ಬ್ಲಡ್‌ಬ್ಯಾಂಕ್‌ಗಳು ರಕ್ತದ ಕೊರತೆಯನ್ನು ಎದುರಿಸುತ್ತಿವೆ.

ಉಡುಪಿ ಹಾಗೂ ಮಂಗಳೂರಿನ ಬ್ಲಡ್‌ ಬ್ಯಾಂಕ್‌ಗಳಲ್ಲಿ ರಕ್ತದ ಅಭಾವ ಎದುರಾಗಿದೆ. ಇಲ್ಲಿನ ಬ್ಲಡ್ ಬ್ಯಾಂಕ್ ಅಧಿಕಾರಿಗಳು ರಕ್ತದಾನಿಗಳಿಗಾಗಿ ಎದುರು ನೋಡುತ್ತಿದ್ದಾರೆ, ಅಲ್ಲದೇ ರಕ್ತದಾನ ಅಭಿಯಾನಗಳನ್ನೂ ಮಾಡುತ್ತಿದ್ದಾರೆ. ನೀವು ರಕ್ತದಾನ ಮಾಡಲು ಬಯಸಿದರೆ ಇದಕ್ಕೂ ಮುನ್ನ ಕೆಲವು ವಿಚಾರಗಳನ್ನು ತಿಳಿದುಕೊಂಡಿರಬೇಕು. ರಕ್ತದಾನ ಮಾಡಲು ಯಾರು ಅರ್ಹರು, ಯಾರು ರಕ್ತದಾನ ಮಾಡಬಹುದು, ರಕ್ತ ತೆಗೆದುಕೊಳ್ಳುವ ಮುನ್ನ ಯಾವೆಲ್ಲಾ ಅಂಶಗಳನ್ನು ಪರಿಗಣಿಸಲಾಗುತ್ತದೆ ಎಂಬ ವಿವರಗಳು ಇಲ್ಲಿದೆ.

18 ರಿಂದ 65 ವರ್ಷದ ಒಳಗಿನ ಯಾ...