Bengaluru, ಮೇ 13 -- ನವದೆಹಲಿ: ಭಾರತದಲ್ಲಿ ಮತ್ತೊಂದು ಭಯೋತ್ಪಾದಕ ದಾಳಿಗೆ ಅವಕಾಶ ನೀಡಿದರೆ ಅದರ ಪರಿಣಾಮ ಚೆನ್ನಾಗಿರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪಾಕಿಸ್ತಾನಕ್ಕೆ ಬಲವಾದ ಎಚ್ಚರಿಕೆ ನೀಡಿದ್ದಾರೆ. ಪಂಜಾಬ್ನ ಆದಂಪುರ ವಾಯುನೆಲೆಯಲ್ಲಿ ವಾಯುಪಡೆಯ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತವು ಯಾವಾಗಲೂ ಶಾಂತಿಯಿಂದ ಇರುತ್ತದೆ, ಆದರೆ ಶತ್ರುಗಳ ನಮ್ಮ ಮೇಲೆ ದಾಳಿ ಮಾಡಿದರೆ ಅವರಿಗೆ ಸೂಕ್ತ ಉತ್ತರ ನೀಡಲು ಅದು ಯಾವಾಗಲೂ ಸಿದ್ಧವಾಗಿದೆ ಎಂದು ಹೇಳಿದರು.
ಪಾಕಿಸ್ತಾನವು ಭಯೋತ್ಪಾದನೆ ಅಥವಾ ಯಾವುದೇ ರೀತಿಯ ಮಿಲಿಟರಿ ದುಷ್ಕೃತ್ಯವನ್ನು ಇನ್ನು ಮುಂದೆ ಬಿಚ್ಚಿಟ್ಟರೆ ಭಾರತವು ಸೂಕ್ತ ಉತ್ತರವನ್ನು ನೀಡುತ್ತದೆ ಎಂದು ಮೋದಿ ಹೇಳಿದ್ದಾರೆ. ನಾವು ಯಾವಾಗಲೂ ಜಾಗರೂಕರಾಗಿರಬೇಕು ಮತ್ತು ಸಿದ್ಧರಾಗಿರಬೇಕು. ನಾವು ಶತ್ರುಗಳಿಗೆ ನವ ಭಾರತದೊಂದಿಗೆ ವ್ಯವಹರಿಸುತ್ತಿದ್ದೇವೆ ಎಂದು ನೆನಪಿಸುತ್ತಲೇ ಇರಬೇಕು ಎಂದು ಮೋದಿ ವಾಯುನೆಲೆಯಲ್ಲಿ ತಿಳಿಸಿದ್ದಾರೆ.
ನಾವು ಉಗ್ರರ ಅಡಗುತಾಣವನ್ನು ಉಡಾಯಿಸಿ, ಧೂ...
Click here to read full article from source
To read the full article or to get the complete feed from this publication, please
Contact Us.