Bangalore, ಮೇ 8 -- ಥ್ರಿಲ್ಲರ್‌ ಸಿನಿಮಾವೆಂದರೆ ಮಲಯಾಳಂ ಚಿತ್ರರಂಗದ ಕಡೆಗೆ ನಾವು ನೋಡುತ್ತೇವೆ. ಕನ್ನಡದಲ್ಲಿಯೂ ಆಗಾಗ ಅಪರಾಧ ಥ್ರಿಲ್ಲರ್‌ ಸಿನಿಮಾಗಳು ಬರುತ್ತಿವೆ. ವಿಜಯ ರಾಘವೇಂದ್ರ ನಟನೆಯ ಅನೇಕ ಸಿನಿಮಾಗಳು ಇಂತಹ ಜಾನರ್‌ ಹೊಂದಿರುತ್ತವೆ. ಕನ್ನಡದಲ್ಲಿ ಇತ್ತೀಚೆಗೆ ಬಂದಿರುವ ಅತ್ಯುತ್ತಮ ಕ್ರೈಮ್‌ ಥ್ರಿಲ್ಲರ್‌ ಸಿನಿಮಾಗಳಲ್ಲಿ ಕೇಸ್ ಆಫ್ ಕೊಂಡಾಣ ಕೂಡ ಒಂದಾಗಿದೆ.

ಅಪರಾಧ ಮಾಡುವ ಪೊಲೀಸ್ ಅಧಿಕಾರಿ ಮತ್ತು ಅದರಿಂದ ಹೊರಬರಲು ಮಾಡುವ ಪ್ರಯತ್ನವೇ ಈ ಸಿನಿಮಾದ ಪ್ರಮುಖಾಂಶ. ಒಂದು ರಾತ್ರಿಯೊಳಗೆ ನಡೆಯುವ ಸಿನಿಮಾ ಇದಾಗಿದೆ. ಒಂದೆಡೆ ಸರಣಿ ಕೊಲೆಗಾರ, ಮತ್ತೊಂದೆಡೆ ಮಗನನ್ನು ಪೋಷಿಸಲು ಮತ್ತು ಆತನ ಆರೋಗ್ಯ ಕಾಪಾಡಲು ಪಾನಿ ಪುರಿ ಮಾರಾಟ ಮಾಡಿ ಬದುಕುಳಿಯುವ ಕುಟುಂಬ ಸೇರಿದಂತೆ ಏಕಕಾಲದಲ್ಲಿ ಅನೇಕ ಕಥೆಗಳನ್ನು ಈ ಸಿನಿಮಾ ಹೇಳುತ್ತದೆ.

ಕೇಸ್ ಆಫ್ ಕೊಂಡಾಣ ಒಂದು ವಿಭಿನ್ನ ಥ್ರಿಲ್ಲರ್ ಸಿನಿಮಾ ಅಂತ ಹೇಳಬಹುದು. ಇದು ಒಬ್ಬ ವ್ಯಕ್ತಿ ಅಥವಾ ಒಂದೇ ಕಥೆಯ ಕುರಿತಾದ ಸಿನಿಮಾ ಅಲ್ಲ. ಲಂಚ ಕೊಟ್ಟು ಪೊಲೀಸ್ ಇಲಾಖೆಯಲ್ಲಿ ಕೆಲಸ ಪಡೆಯ...