ಭಾರತ, ಮೇ 12 -- ಜನ್ಮಕುಂಡಲಿಯಲ್ಲಿ ಪ್ರತಿಯೊಬ್ಬರು ಕುಜದೋಷದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ವಿವಾಹದ ಬಗ್ಗೆ ಯಾವುದೋ ಭಯ ಅವರನ್ನು ಆವರಿಸಿರುತ್ತದೆ. ಆದರೆ ಕುಜನು ಕೇವಲ ಪತಿಯನ್ನು ಮಾತ್ರ ಸೂಚಿಸುವುದಿಲ್ಲ. ಕುಜನಿಂದ ಸೋದರರ ಬಗ್ಗೆಯೂ ತಿಳಿಯಬಹುದು. ಭೂಮಿ ಅಥವಾ ಮನೆಯನ್ನು ಸೂಚಿಸುತ್ತದೆ. ಕುಜನಿಗೆ ಗುರು, ಶುಕ್ರ ಅಥವಾ ಶನಿಯ ದೃಷ್ಠಿ ಇದ್ದಲ್ಲಿ ಕುಂಡಲಿಯಲ್ಲಿಯೇ ಕುಜದೋಷವು ಪರಿಹಾರವಾಗಿರುತ್ತದೆ. ಆದರೆ ಕುಜದೋಷದ ಪರಿಹಾರ ಮಾಡಿದಲ್ಲಿ ಮಾತ್ರ ನಮ್ಮ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.

ಶ್ರೀ ಸುಬ್ರಹ್ಮಣ್ಯಸ್ವಾಮಿಯ ಪೂಜೆಯಿಂದ ಕುಜದೋಷ ನಿವಾರಣೆ ಆಗುತ್ತದೆ. ಅದರೊಂದಿಗೆ ಉತ್ತಮ ವಿದ್ಯಾಭ್ಯಾಸವೂ ದೊರೆಯುತ್ತದೆ. ಮುಖ್ಯವಾಗಿ ಉತ್ತಮ ತಾಂತ್ರಿಕ ಪರಿಣತಿಗಾಗಿ ಕುಜ ಮತ್ತು ಶನಿಯ ಶಾಂತಿ ಮಾಡಬೇಕಾಗುತ್ತದೆ. ಶ್ರೀ ಕುಮಾರಸ್ವಾಮಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮತ್ತು ವಲ್ಲಿ ದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯಸ್ವಾಮಿಯ ಪೂಜೆಯನ್ನು ಮಾಡುವುದು ಸಂಪ್ರದಾಯ. ಇದೇ ರೀತಿ ಲಕ್ಷ್ಮೀಸಮೇತ ಶ್ರೀ ನರಸಿಂಹಸ್ವಾಮಿ ಪೂಜೆಯನ್ನು ನೆ...