Bengaluru, ಮೇ 21 -- ಹಲವೆಡೆ ಮಳೆ ಉಧೋ ಎಂದು ಸುರಿಯುತ್ತಿದೆ. ಈ ಮಳೆಗೆ ಏನಾದರೂ ಬಿಸಿಬಿಸಿಯಾದ ಅಥವಾ ಖಾರ-ಖಾರವಾಗಿರುವ ಖಾದ್ಯ ತಿನ್ನಬೇಕು ಎಂದೆನಿಸುವುದು ಸಹಜ. ಅಲ್ಲದೆ, ಈ ಸಮಯದಲ್ಲಿ ಶೀತ, ಗಂಟಲು ನೋವು, ಜ್ವರ ಮುಂತಾದ ಕಾಯಿಲೆಗಳು ಕೂಡ ಕಾಣಿಸಿಕೊಳ್ಳುತ್ತದೆ. ಋತುಮಾನದ ಕಾಯಿಲೆಗಳ ವಿರುದ್ಧ ಹೋರಾಡಲು ಚಿಕನ್ ಪೆಪ್ಪರ್ ರಸಂ ಸಹಕಾರಿ. ಇದು ರುಚಿಕರವಾಗಿರುವುದು ಮಾತ್ರವಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ.

ಚಿಕನ್ ಪೆಪ್ಪರ್ ರಸಂ ಹೆಸರು ಕೇಳಿದರೆ ಮಾಂಸಾಹಾರ ಪ್ರಿಯರ ಬಾಯಲ್ಲಿ ನೀರೂರಬಹುದು. ಈ ಖಾರವಾದ ಖಾದ್ಯವನ್ನು ಒಮ್ಮೆ ಮಾಡಿ ನೋಡಿದರೆ, ಮತ್ತೆ ಮತ್ತೆ ಮಾಡಿ ತಿನ್ನಬೇಕು ಎಂದೆನಿಸಬಹುದು. ಇದರಲ್ಲಿ ಕಾಳುಮೆಣಸು, ಕೋಳಿ ಮಾಂಸ ಮತ್ತು ಅರಿಶಿನವನ್ನು ಬಳಸಲಾಗುತ್ತದೆ. ಇವೆಲ್ಲವೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಸೋಂಕುಗಳನ್ನು ದೂರವಿಡುತ್ತವೆ. ಹಾಗಾದರೆ ಚಿಕನ್ ಪೆಪ್ಪರ್ ರಸಂ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು: ಕೋಳಿ ಮಾಂಸ - ಅರ್ಧ ಕ...