Bangalore, ಏಪ್ರಿಲ್ 30 -- ಬೆಂಗಳೂರು: ನೀವು ಪಡಿತರ ಕಾರ್ಡ್‌ದಾರರಾಗಿದ್ದರೆ ಕೆವೈಸಿ ಪ್ರಕ್ರಿಯೆಯನ್ನು ಈ ತಿಂಗಳ ಅಂತ್ಯದವರೆಗೆ ಮುಗಿಸಿಕೊಳ್ಳಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸೂಚನೆ ನೀಡಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪಡಿತರ ಕಾರ್ಡ್‌ ದಾರರಿಗೆ ಕೆಲ ಸೂಚನೆ ನೀಡಿದೆ.ರೇಷನ್‌ ಕಾರ್ಡ್‌ ಹೊಂದಿದ ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಆಧಾರ್‌ಆಧರಿತ ಹೆಬ್ಬೆಟ್ಟಿನ ದೃಢೀಕರಣ ಇ ಕೆವೈಸಿ(E KYC) ಮಾಡಿಸುವುದು ಕಡ್ಡಾಯ. ಇದಕ್ಕಾಗಿ ಮತ್ತೊಮ್ಮ ಕೆವೈಸಿ ಮಾಡಿಸುವ ಅವಕಾಶವನ್ನು ಏಪ್ರಿಲ್‌ 30 ರವರಗೆ ನೀಡಲಾಗಿದೆ. ಇದು ಕೊನೆಯ ಅವಕಾಶವಾಗಿದೆ. ಪಡಿತರ ಚೀಟಿದಾರರ ಪೈಕಿ ಈ ವರೆಗೂ ಕೆವೈಸಿ ಮಾಡಿಸಿದರ ಕುಟುಂಬದ ಸದಸ್ಯರು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗಿ ಸೂಕ್ಯದಾಖಲೆಗಳನ್ನು ಸಲ್ಲಿಸಿ ಬಯೋ ದೃಢೀಕರಣ ನೀಡಲು ತಿಳಿಸಲಾಗಿದೆ. ಈ ಆಧಾರ್‌ ದೃಢೀಕರಣ ಮಾಡಿಸುವುದು ಸಂಪೂರ್ಣ ಉಚಿತ

ನೀವು ಪಡಿತರ ಕಾರ್ಡ್‌ ಹೊಂದಿದ್ದೀರಾ, ಅದರಲ್ಲೂ ಬಿಪಿಎಲ್‌ ಕ...