ಭಾರತ, ಮೇ 26 -- ಪ್ರತಿ ವರ್ಷ ವೈಶಾಖ ಮಾಸದ ಅಮಾವಾಸ್ಯೆಯಂದು ವಟ ಸಾವಿತ್ರಿ ವ್ರತವನ್ನು ಆಚರಿಸಲಾಗುತ್ತದೆ. ಈ ದಿನ ಆಲದ ಮರವನ್ನು ಪೂಜಿಸುವುದು ವಿಶೇಷ. ವಿಶೇಷವಾಗಿ ಇಂದು ವಿವಾಹಿತ ಹೆಣ್ಣುಮಕ್ಕಳು ವ್ರತಾಚರಣೆ ಮಾಡಿ ಪೂಜೆ ಸಲ್ಲಿಸುತ್ತಾರೆ. ವಟ ಸಾವಿತ್ರಿ ವ್ರತದ ಆಚರಣೆಯ ಹಿಂದೆ ಒಂದು ಧಾರ್ಮಿಕ ಕಥೆ ಇದೆ. ಈ ದಿನವು ಸಾವಿತ್ರಿ ಹಾಗೂ ಸತ್ಯವಾನನ ಕಥೆಯೊಂದಿಗೆ ಸಂಬಂಧವನ್ನು ಹೊಂದಿದೆ. ಈ ಪೌರಾಣಿಕ ಕಥೆಯ ವಿವರ ಇಲ್ಲಿದೆ.
ಒಂದಾನೊಂದು ಕಾಲದಲ್ಲಿ, ಮಾದ ದೇಶದಲ್ಲಿ, ಅಶ್ವಪತಿ ಎಂಬ ರಾಜ ವಾಸಿಸುತ್ತಿದ್ದ. ಅವನು ಮತ್ತು ಅವನ ಹೆಂಡತಿ ಮಕ್ಕಳ ಭಾಗ್ಯಕ್ಕಾಗಿ ದೇವಿಯನ್ನು ಪೂಜಿಸಿ, ಮಕ್ಕಳಾಗಲು ವರವನ್ನು ಕೇಳಿದರು. ಈ ಪೂಜೆಯ ನಂತರ, ಅವರಿಗೆ ಎಲ್ಲಾ ಸದ್ಗುಣಗಳಿಂದ ಕೂಡಿದ ಮಗಳು ಜನಿಸುತ್ತಾಳೆ. ಅವಳಿಗೆ ಸಾವಿತ್ರಿ ಎಂದು ಹೆಸರಿಡುತ್ತಾರೆ. ಸಾವಿತ್ರಿ ಮದುವೆಗೆ ಅರ್ಹಳಾದಾಗ, ರಾಜ ಅವಳಿಗೆ ಸ್ವ ಇಚ್ಛೆಯಿಂದ ಹುಡುಗನನ್ನು ಆರಿಸಿಕೊಳ್ಳಲು ಹೇಳುತ್ತಾನೆ. ಒಂದು ದಿನ ಮಹರ್ಷಿ ನಾರದ ಮತ್ತು ಅಶ್ವಪತಿ ಮಾತನಾಡುತ್ತಿರುವಾಗ, ಸಾವಿತ್ರಿ ತಾನು ಆ...
Click here to read full article from source
To read the full article or to get the complete feed from this publication, please
Contact Us.