Bengaluru, ಮಾರ್ಚ್ 30 -- ಶ್ರೀ ವಿಶ್ವಾವಸು ನಾಮ ಸಂವತ್ಸರದ ನವನಾಯಕರು ಇವರು. ರಾಜ-ರವಿ, ಮಂತ್ರಿ-ಚಂದ್ರ, ಸೇನಾಧಿಪತಿ-ರವಿ, ಸಸ್ಯಾಧಿಪತಿ-ಗುರು, ಧಾನ್ಯಾಧಿಪತಿ- ಕುಜ ಅರ್ಘಾಧಿಪತಿ-ರವಿ, ಮೇಘಾಧಿಪತಿ-ರವಿ, ರಸಾಧಿಪತಿ-ಶನಿ, ನೀರಸಾಧಿಪತಿ-ಬುಧ ಪಶುನಾಯಕ-ಯಮ.

ರವಿಯು ರಾಜನಾಗಿರುವ ಕಾರಣ ರಾಷ್ಟ್ರಪಾಲಕರಲ್ಲಿ ಪರಸ್ಪರ ವೈರ ಉಂಟಾಗುತ್ತದೆ. ಮೋಡಗಳು ಹೆಚ್ಚು ಮಳೆಯನ್ನು ಸುರಿಸುವುದಿಲ್ಲ. ಪ್ರಜೆಗಳಿಗೆ ಸರ್ಕಾರ, ಶಸ್ತ್ರಗಳಿಂದ ಭಯ, ಮತ್ತು ಬೆಂಕಿಯಿಂದ ತೊಂದರೆ ಉಂಟಾಗಬಹುದು.

ಚಂದ್ರನು ಮಂತ್ರಿಯಾಗಿರುವುದರಿಂದ ಸಕಾಲದಲ್ಲಿ ಒಳ್ಳೆಯ ಮಳೆಯಾಗಿ ಸಸ್ಯಗಳು ಫಲಿಸುತ್ತದೆ, ದೇಶದಲ್ಲಿ ಸುಭಿಕ್ಷವುಂಟಾಗುತ್ತದೆ. ಪ್ರಜೆಗಳು ಕ್ಷೇಮಾರೋಗ್ಯಗಳಿಂದ ಕೂಡಿರುವ ಸಾಧ್ಯತೆ ಇದೆ.

ರವಿಯು ಸೇನಾಧಿಪತಿಯಾಗಿರುವುದರಿಂದ ರಾಷ್ಟ್ರಾಧಿಕಾರಿಗಳಲ್ಲಿ ಪರಸ್ಪರ ಘರ್ಷಣೆ ಸಂಭವಿಸುತ್ತದೆ. ಮೋಡಗಳು ಗಾಳಿಯಿಂದಕೂಡಿ ಅಲ್ಪ ಮಳೆ ಸುರಿಸುತ್ತವೆ, ಕೆಂಪುಧಾನ್ಯ ಹುಲುಸಾಗಿ ಬೆಳೆಯುತ್ತದೆ.

ಗುರುವು ಸಸ್ಯಾಧಿಪತಿಯಾಗಿರುವುದರಿಂದ ಬಹುವಿಧ ಸಸ್ಯಗಳು ಪೂರ್ಣವಾಗಿ ಫಲಿ...