ಭಾರತ, ಮೇ 16 -- ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಇಂಗ್ಲೆಂಡ್ ಪ್ರವಾಸಕ್ಕೆ ಭಾರತ 'ಎ' ತಂಡವನ್ನು ಪ್ರಕಟಿಸಿದೆ. ಇದು ಹಿರಿಯರ ತಂಡದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ನಡೆಯಲಿದೆ. ದೀರ್ಘಕಾಲದಿಂದ ಭಾರತದ ಪ್ರಮುಖ ತಂಡದಲ್ಲಿ ಆಡುವ ಕನಸು ಹೊಂದಿರುವ ಅಭಿಮನ್ಯು ಈಶ್ವರನ್​ಗೆ ನಾಯಕತ್ವ ವಹಿಸಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ ರನ್​ಗಳ ಸುರಿಮಳೆಗೈದಿದ್ದ ಕರುಣ್ ನಾಯರ್​ ಸಹ ಆಯ್ಕೆಯಾಗಿದ್ದಾರೆ. ಸಂಭಾವ್ಯ ನೂತನ ನಾಯಕ ಶುಭ್ಮನ್ ಗಿಲ್ 2ನೇ ಅಭ್ಯಾಸ ಪಂದ್ಯಕ್ಕೆ ಲಭ್ಯರು.

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ 'ಎ' ತಂಡವನ್ನು ಮುನ್ನಡೆಸಿದ್ದರೂ, ಪ್ರಮುಖ ತಂಡಕ್ಕೆ ಸೇರಲು ಸಾಕಷ್ಟು ಫಿಟ್ ಆಗಿದ್ದರೂ ಋತುರಾಜ್​ರನ್ನು ನಾಯಕನನ್ನಾಗಿ ಆಯ್ಕೆ ಮಾಡಲಿಲ್ಲ. ಭುಜದ ಗಾಯದ ಕಾರಣ 28 ವರ್ಷದ ಗಾಯಕ್ವಾಡ್, ಪ್ರಸಕ್ತ ಐಪಿಎಲ್​ನಿಂದ ಹೊರಗುಳಿದಿದ್ದಾರೆ. ಬಿಸಿಸಿಐ ಆದೇಶವನ್ನು ಧಿಕ್ಕರಿಸಿ ಶಿಕ್ಷೆ ಅನುಭವಿಸಿದ ನಂತರ ಪಾಠ ಕಲಿತ ಇಶಾನ್ ಕಿಶನ್ ಈಗ ತಂಡಕ್ಕೆ ಮರಳಿದ್ದಾರೆ. ಶುಭ್ಮನ್ ಗಿಲ್ ಜತೆಗೆ ಸಾಯಿ ಸುದರ್ಶನ್ 2ನೇ ಪಂದ್ಯಕ್ಕೆ ...