ಭಾರತ, ಮೇ 16 -- ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಇಂಗ್ಲೆಂಡ್ ಪ್ರವಾಸಕ್ಕೆ ಭಾರತ 'ಎ' ತಂಡವನ್ನು ಪ್ರಕಟಿಸಿದೆ. ಇದು ಹಿರಿಯರ ತಂಡದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ನಡೆಯಲಿದೆ. ದೀರ್ಘಕಾಲದಿಂದ ಭಾರತದ ಪ್ರಮುಖ ತಂಡದಲ್ಲಿ ಆಡುವ ಕನಸು ಹೊಂದಿರುವ ಅಭಿಮನ್ಯು ಈಶ್ವರನ್ಗೆ ನಾಯಕತ್ವ ವಹಿಸಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ರನ್ಗಳ ಸುರಿಮಳೆಗೈದಿದ್ದ ಕರುಣ್ ನಾಯರ್ ಸಹ ಆಯ್ಕೆಯಾಗಿದ್ದಾರೆ. ಸಂಭಾವ್ಯ ನೂತನ ನಾಯಕ ಶುಭ್ಮನ್ ಗಿಲ್ 2ನೇ ಅಭ್ಯಾಸ ಪಂದ್ಯಕ್ಕೆ ಲಭ್ಯರು.
ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ 'ಎ' ತಂಡವನ್ನು ಮುನ್ನಡೆಸಿದ್ದರೂ, ಪ್ರಮುಖ ತಂಡಕ್ಕೆ ಸೇರಲು ಸಾಕಷ್ಟು ಫಿಟ್ ಆಗಿದ್ದರೂ ಋತುರಾಜ್ರನ್ನು ನಾಯಕನನ್ನಾಗಿ ಆಯ್ಕೆ ಮಾಡಲಿಲ್ಲ. ಭುಜದ ಗಾಯದ ಕಾರಣ 28 ವರ್ಷದ ಗಾಯಕ್ವಾಡ್, ಪ್ರಸಕ್ತ ಐಪಿಎಲ್ನಿಂದ ಹೊರಗುಳಿದಿದ್ದಾರೆ. ಬಿಸಿಸಿಐ ಆದೇಶವನ್ನು ಧಿಕ್ಕರಿಸಿ ಶಿಕ್ಷೆ ಅನುಭವಿಸಿದ ನಂತರ ಪಾಠ ಕಲಿತ ಇಶಾನ್ ಕಿಶನ್ ಈಗ ತಂಡಕ್ಕೆ ಮರಳಿದ್ದಾರೆ. ಶುಭ್ಮನ್ ಗಿಲ್ ಜತೆಗೆ ಸಾಯಿ ಸುದರ್ಶನ್ 2ನೇ ಪಂದ್ಯಕ್ಕೆ ...
Click here to read full article from source
To read the full article or to get the complete feed from this publication, please
Contact Us.