Bangalore, ಮೇ 16 -- ಬೆಂಗಳೂರು:ಬಹು ದಿನಗಳ ಬೇಡಿಕೆಯಾಗಿದ್ದ ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ತಾಣ ವಿಜಯಪುರ ಜಿಲ್ಲೆಯ ಆಲಮಟ್ಟಿಯಿಂದ ಕಲ್ಯಾಣ ಕರ್ನಾಟಕದ ಯಾದಗಿರಿಗೆ ಮುದ್ದೆಬಿಹಾಳ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗ, ಒಂದು ಕಾಲದ ಉದ್ಯಮ ನಗರಿ ಭದ್ರಾವತಿಯಿಂದ ಚನ್ನಗಿರಿ ಮಾರ್ಗವಾಗಿ ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರಿಗೆ ಸಂಪರ್ಕ ಒದಗಿಸುವ ಎರಡು ಮಾರ್ಗಗಳ ಅಂತಿಮ ಸಮೀಕ್ಷೆಗೆ ಭಾರತೀಯ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಈ ಮಾರ್ಗಗಳ ರಚನೆ ವಿಚಾರವಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆದಿದ್ದರೂ ಅನುಮತಿ ದೊರೆತಿರಲಿಲ್ಲ. ಕರ್ನಾಟದವರೇ ಆಗಿರುವ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಒತ್ತಡದ ಕಾರಣದಿಂದ ಎರಡು ಯೋಜನೆಗಳ ಅಂತಿಮ ಸಮೀಕ್ಷೆ ಶುರುವಾಗಲಿದೆ.

ಕರ್ನಾಟಕದ ರೈಲು ಮೂಲಸೌಕರ್ಯವನ್ನು ಬಲಪಡಿಸುವ ಮಹತ್ವದ ಕ್ರಮದಲ್ಲಿ, ನೈಋತ್ಯ ರೈಲ್ವೆ ವಲಯದ ಅಡಿಯಲ್ಲಿ ಬರುವ ಎರಡು ಪ್ರಮುಖ ಹೊಸ ರೈಲು ಮಾರ್ಗಗಳ ಅಂತಿಮ ಸ್ಥಳ ಸಮೀಕ್ಷೆ (FLS) ನಡೆಸಲು ರೈಲ್ವೆ ಮಂಡಳಿ ಅನುಮೋದನೆ ನೀಡಲಾಗಿದೆ ಎಂದು ನೈರುತ್...