ಭಾರತ, ಮಾರ್ಚ್ 29 -- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಹೀನಾಯ ಸೋಲು ಕಂಡಿತು. ತಮ್ಮದೇ ತವರಿನಲ್ಲಿ 50 ರನ್‌ಗಳ ಸೋಲು ಕಂಡ ಸಿಎಸ್‌ಕೆ, ಟೂರ್ನಿ ಆರಂಭದಲ್ಲೇ ಭಾರಿ ಹಿನ್ನಡೆ ಅನುಭವಿಸಿದೆ. ಗೆದ್ದೇ ಗೆಲ್ಲುವ ಅತ್ಯುತ್ಸಾಹದಲ್ಲಿದ್ದ ತಂಡಕ್ಕೆ, ಆರ್‌ಸಿಬಿ ತಂಡದ ಸಂಘಟಿತ ಹೋರಾಟ ಹಾಗೂ ಉತ್ಸಾಹಭರಿತ ಆಟವೇದೊಡ್ಡ ಪೆಟ್ಟು ಕೊಟ್ಟಿತು. ಆರ್‌ಸಿಬಿ ತಂಡವು ಭರ್ಜರಿ ಆರಂಭ ಪಡೆದಿದ್ದು, ಟೂರ್ನಿಯನ್ನು ಸತತ ಎರಡು ಗೆಲುವುಗಳೊಂದಿಗೆ ಅಮೋಘವಾಗಿ ಆರಂಭಿಸಿದೆ. ಅಂಕಪಟ್ಟಿಯಲ್ಲೂ ಅಗ್ರಸ್ಥಾನ ಪಡೆದಿದ್ದು, ಉತ್ಸಾಹ ದುಪ್ಪಟ್ಟು ಆಗಿದೆ.

ಇದನ್ನೂ ಓದಿ | 9ನೇ ಕ್ರಮಾಂಕದಲ್ಲಿ ಎಂಎಸ್ ಧೋನಿ ಬ್ಯಾಟಿಂಗ್; ಮಾಹಿ ವಿರುದ್ಧವೇ ಸಿಡಿದೆದ್ದ ಸಿಎಸ್​ಕೆ ಮಾಜಿ ಕ್ರಿಕೆಟಿಗರು

ತವರು ನೆಲದಲ್ಲಿ ತಾನು ಅಜೇಯ ಎಂದು ಬೀಗುತ್ತಿದ್ದ ಸಿಎಸ್‌ಕೆ ತಂಡಕ್ಕೆ, ಆರ್‌ಸಿಬಿ ವಿರುದ್ಧದ ಸೋಲಿನಿಂದ ಗರ್ವಭಂಗವಾಗಿದ್ದು ಸತ್ಯ. ಮೊದಲಿಗೆ ಈ ಸೋಲಿನಿಂದ ತಂಡ ಹೊರಬರಬೇಕಿದೆ. ಮುಂದಿನ ಪಂದ್ಯದಲ್ಲಿ ಗೆಲುವು ಮಾತ್ರವಲ್ಲದೆ, ಕನಿ...