Bengaluru, ಮಾರ್ಚ್ 29 -- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ತನ್ನದೇ ತವರಿನಲ್ಲಿ ಸೋಲು ಕಂಡಿತು. ಆರ್‌ಸಿಬಿ ನೀಡಿದ 197 ರನ್‌ಗಳ ಬೃಹತ್‌ ಗುರಿ ಬೆನ್ನಟ್ಟಿದ ಸಿಎಸ್‌ಕೆ, 50 ರನ್‌ಗಳಿಂದ ಸೋಲು ಕಂಡಿತು. ಸಿಎಸ್‌ಕೆ ಸೋಲಿನ ಬೆನ್ನಲ್ಲೇ ಹಳದಿ ಆರ್ಮಿ ಅಭಿಮಾನಿಗಳು ಭಾರಿ ಆಕ್ರೋಶ ಹೊರಹಾಕಿದ್ದಾರೆ. ಅದರಲ್ಲೂ, ತಂಡದ ಮುಂದೆ ಬೃಹತ್‌ ಮೊತ್ತದ ಗುರಿ ಇದ್ದಾಗಲೂ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಎಂಎಸ್‌ ಧೋನಿ ನಿರ್ಧಾರ ಅಭಿಮಾನಿಗಳಿಗೆ ಸರಿ ಕಾಣಿಸಿಲ್ಲ. ತಂಡದ ಬ್ಯಾಟರ್‌ಗಳೆಲ್ಲಾ ರನ್‌ ಗಳಿಸಲಾಗದೆ ಪರದಾಡುತ್ತಿದ್ದಾಗ, ಮಾಹಿ ಬಂದು ತಂಡವನ್ನು ರಕ್ಷಿಸುತ್ತಾರೆ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.

ಮಾಹಿ ಯಾಕೆ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು ಎಂಬುದು ಅಭಿಮಾನಿಗಳಿಗೆ ದೊಡ್ಡ ಪ್ರಶ್ನೆಯಾಗಿತ್ತು. ಅದಕ್ಕೆ ಧೋನಿ ಸೀಸನ್‌ ಆರಂಭವಾಗುವ ಮುನ್ನವೇ ಉತ್ತರ ಕೊಟ್ಟಿದ್ದಾರೆ. ಆದರೆ, ಈ ಉತ್ತರ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವಂತಿಲ್ಲ....