ಭಾರತ, ಏಪ್ರಿಲ್ 2 -- ಆರ್​ಸಿಬಿ ಮಾಜಿ ವೇಗಿ ಮೊಹಮ್ಮದ್ ಸಿರಾಜ್ (19/3) ಮಾರಕ ಬೌಲಿಂಗ್ ದಾಳಿ ಮತ್ತು ಜೋಸ್ ಬಟ್ಲರ್​ ಅರ್ಧಶತಕ, ಸಾಯಿ ಸುದರ್ಶನ್ (49) ಆಕರ್ಷಕ ಆಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಆರ್​ಸಿಬಿ ತವರಿನ ಪ್ರೇಕ್ಷಕರ ಮುಂದೆ ಮುಗ್ಗರಿಸಿ ಮೊದಲ ಸೋಲಿಗೆ ಶರಣಾಗಿದೆ. ಆದರೆ ಇದು ಗುಜರಾತ್​ಗೆ ಸತತ 2ನೇ ಗೆಲುವು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ 2025ರ ಇಂಡಿಯನ್ ಪ್ರೀಮಿಯರ್ ಲೀಗ್​ನ 14ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿತು. ಬ್ಯಾಟರ್​​ಗಳ ವೈಫಲ್ಯದ ನಡುವೆಯೂ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಸಿದ ಅದ್ಭುತ ಅರ್ಧಶತಕದ ಸಹಾಯದಿಂದ ನಿಗದಿತ 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು.

ಆರ್​ಸಿಬಿ ಬ್ಯಾಟರ್​ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದ ಆರ್​​ಸಿಬಿಯ ಮಾಜಿ ವೇಗಿ ಮೊಹಮ್ಮದ್ ಸಿರಾಜ್,...