ಭಾರತ, ಮೇ 7 -- ಆಪರೇಷನ್ ಸಿಂಧೂರ: ಭಾರತದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಉಗ್ರ ನೆಲೆಗಳ ಮೇಲೆ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಇಂದು (ಮೇ 7) ನಸುಕಿನ ವೇಳೆ ನಡೆಸಿತು. ಈ ಕಾರ್ಯಾಚರಣೆ ಬೆನ್ನಿಗೆ ಪಾಕಿಸ್ತಾನದ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳ ಮಹಾಪೂರವೇ ಹರಿದಾಡಿವೆ. ಪಾಕಿಸ್ತಾನ ಸೇನೆಯು ಭಾರತದ 5 ಸಮರ ವಿಮಾನಗಳನ್ನು ಹೊಡೆದುರುಳಿಸಿದೆ. ಭಾರತದ ಸೇನಾ ನೆಲೆ ಮೇಲೆ ಪ್ರತಿದಾಳಿ ನಡೆಸಿದೆ ಎಂಬಿತ್ಯಾದಿ ವರದಿಗಳು ಪಾಕಿಸ್ತಾನದ ಮಾಧ್ಯಮಗಳಲ್ಲಿ ಗಮನಸೆಳೆಯುತ್ತಿವೆ.

ಪಾಕಿಸ್ತಾನ ಮಿಲಿಟರಿ ತನ್ನ ನೆರೆಯ ದೇಶದಿಂದ ತಡರಾತ್ರಿಯ ದಾಳಿಗೆ ಪ್ರತೀಕಾರವಾಗಿ 5 ಭಾರತೀಯ ಜೆಟ್‌ಗಳನ್ನು ಉರುಳಿಸಿದೆ, ಮಧ್ಯರಾತ್ರಿಯ ನಂತರ ಕೋಟ್ಲಿ, ಬಹವಾಲ್ಪುರ್, ಮುರಿಡ್ಕೆ, ಬಾಗ್ ಮತ್ತು ಮುಜಫರಾಬಾದ್ ತಾಣಗಳಲ್ಲಿ ದಾಳಿ ನಡೆದಿತ್ತು ಎಂದು ರಾಜ್ಯ ಮಾಧ್ಯಮಗಳನ್ನು ಉಲ್ಲೇಖಿಸಿ ದ ಡಾನ್ ವರದಿ ಮಾಡಿದೆ.

ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲಾಹ್ ತರಾರ್‌ ಕೂಡ ಸುಳ್ಳು ಸುದ್ದಿ ಹರಡುವುದರಲ್ಲಿ ನಿರತರಾಗಿದ್ದು, ಪಾಕಿಸ್ತಾನ ಸೇನೆಯು ಭ...