ಭಾರತ, ಮೇ 7 -- ಪಾಕಿಸ್ತಾನದ 9 ಸ್ಥಳಗಳ ಮೇಲೆ ಭಾರತ ನಿಖರ ಕ್ಷಿಪಣಿ ದಾಳಿ ನಡೆಸಿ ಉಗ್ರರ ತರಬೇತಿ ಶಿಬಿರಗಳನ್ನು ಧ್ವಂಸ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಅಮಾಯಕರ ನರಮೇಧಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು 'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ಈ ಮಹತ್ವದ ಕಾರ್ಯಾಚರಣೆ ನಡೆಸಿದೆ. ಪಾಕಿಸ್ತಾನದ ಮಾಧ್ಯಮಗಳಲ್ಲಿ ಪ್ರತೀಕಾರದ ಬಗ್ಗೆ ಚರ್ಚೆ ಆರಂಭವಾಗಿದೆಯಾದರೂ ಅದು ಏನು ಮಾಡಲಿದೆ ಎನ್ನುವ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ. ಒಂದು ವೇಳೆ ಭಾರತ ಮತ್ತು ಪಾಕಿಸ್ತಾನದ ನಡುವಣ ಸಂಘರ್ಷ ಪೂರ್ಣ ಪ್ರಮಾಣದ ಯುದ್ಧವೇ ಆಗಿ ಪರಿವರ್ತನೆಯಾದರೆ ನಾಗರಿಕರು ಹೇಗೆ ವರ್ತಿಸಬೇಕು ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಈ ಕುರಿತ ಮಹತ್ವದ ವಿವರ ಇಲ್ಲಿದೆ.

1) ನಿಮ್ಮ ಮನೆ, ಗ್ರಾಮ ಅಥವಾ ನಗರಗಳಲ್ಲಿ ಸೇನಾ ವಾಹನಗಳ ಚಲನವಲನ ಕಂಡುಬಂದರೆ ಅದನ್ನು ವಿಡಿಯೊ ಮಾಡಬೇಡಿ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ.

2) ಸೇನಾ ಸಿಬ್ಬಂದಿ, ಯುದ್ಧೋಪಕರಣಗಳನ್ನು ಹೊತ್ತ ರೈಲುಗಳು ಹಾದು ಹೋಗುವುದು ಅಥವಾ ನಿಲ್ದಾಣ...