ಭಾರತ, ಮೇ 7 -- ಆಪರೇಷನ್ ಸಿಂಧೂರ: ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತದ ಸಶಸ್ತ್ರ ಪಡೆಗಳು ಬುಧವಾರ (ಮೇ 7) ನಸುಕಿನ ವೇಳೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ, ಪಿಒಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ)ದಲ್ಲಿದ್ದ ಎಲ್‌ಇಟಿ, ಜೆಎಇಂ ಕೇಂದ್ರ ಕಚೇರಿ ಸೇರಿ 9 ಉಗ್ರ ನೆಲೆಗಳನ್ನು ನಾಶ ಮಾಡಿವೆ. ಇದನ್ನು ಭಾರತದ ರಕ್ಷಣಾ ಸಚಿವಾಲಯ ದೃಢೀಕರಿಸಿದ್ದು, ಭಾರತ ನಡೆಸಿದ ದಾಳಿಯು ನಿಶ್ಚಿತವಾದ ಅಂದರೆ ಕೇಂದ್ರೀಕೃತ ಹಾಗೂ ಅಳೆದು ತೂಗಿದ ಪ್ರಚೋದನಕಾರಿಯಲ್ಲದ ಭಯೋತ್ಪಾದನಾ ನೆಲೆಗಳ ಮೇಲಿನ ದಾಳಿ ಎಂಬುದನ್ನು ಸ್ಪಷ್ಟವಾಗಿ ಹೇಳಿದೆ. ಗಡಿಯಾಚೆಗಿನ ಭಯೋತ್ಪಾದನೆ ನಿಯಂತ್ರಿಸುವುದಕ್ಕೆ ಭಾರತ ಸರ್ಕಾರ ಹೆಚ್ಚು ನಿಖರವಾದ ದಾಳಿಯನ್ನು ಆಯೋಜಿಸಿದ್ದು, ಇದಕ್ಕೆ ಈಗಾಗಲೇ ಅಮೆರಿಕ ಹಾಗೂ ಇತರೆ ದೇಶಗಳ ಬೆಂಬಲ ಸಿಕ್ಕಿದೆ. ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಲಷ್ಕರ್ ಏ ತೊಯ್ಬಾ (ಎಲ್‌ಇಟಿ), ಜೈಷ್ ಏ ಮೊಹ್ಮದ್ (ಜೆಇಎಂ) ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ನೆಲೆಗಳು ನಾಶವಾಗಿವೆ.

1) ಬಹವಾಲ್‌ಪುರದ ಜೆಇಎಂ ಕೇಂದ್ರ...