ಭಾರತ, ಮೇ 7 -- ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ್ದ ದಾಳಿಗೆ ಭಾರತ ಇಂದು (ಮೇ 7, ಬುಧವಾರ) ಪ್ರತೀಕಾರ ತೀರಿಸಿಕೊಂಡಿದ್ದು, ಜೈಷ್ ಉಗ್ರ ಸಂಘಟನೆಯ ನಾಯಕ ಮಸೂದ್ ಅಜರ್ ಗೆ ಬಿಗ್ ಶಾಕ್ ನೀಡಿದೆ. ಪಾಕಿಸ್ತಾನದ ಬಹವಾಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಮುಖ್ಯ ನೆಲೆ ಮರ್ಕಜ್ ಸುಭಾನ್ ಅಲ್ಲಾಹ್ ಮೇಲೆ ಭಾರತೀಯ ಸೇನೆ ತಡರಾತ್ರಿ ನಡೆಸಿದ ದಾಳಿಯಲ್ಲಿ ಮಸೂದ್ ಅಜರ್ ನ ಪತ್ನಿ, ಮಗ ಮತ್ತು ಸಹೋದರಿ ಸೇರಿದಂತೆ ಕುಟುಂಬದ 10 ಸದಸ್ಯರು ಸಾವನ್ನಪ್ಪಿದ್ದಾರೆ.

ಟಿವಿ ವರದಿಗಳ ಪ್ರಕಾರ, ಮಸೂದ್ ನ ಹಿರಿಯ ಸಹೋದರಿ, ಸೋದರ ಮತ್ತು ನಾಲ್ವರು ಆಪ್ತರು ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಕುಟುಂಬದ 10 ಮಂದಿ ಮತ್ತು ನಾಲ್ವರು ಆಪ್ತರು ಸೇರಿ ಒಟ್ಟು 14 ಮಂದಿ ಭಾರತೀಯ ಸೇನಾ ದಾಳಿಯಲ್ಲಿ ಹತರಾಗಿದ್ದಾರೆ. ಹತ್ಯೆಗೀಡಾದವರಲ್ಲಿ ಮೌಲಾನಾ ಕಾಶಿಫ್, ಇವರ ಕುಟುಂಬದ ಮೌಲಾನಾ ಅಬ್ದುಲ್ ರವೂಫ್ ಅವರ ಹಿರಿಯ ಮಗಳು, ಮೊಮ್ಮಗ ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ. ಈ ದಾಳಿಯಲ್ಲಿ ಕುಟುಂಬವನ್ನು ನಿರ್ಮೂಲನೆ ಮಾಡಿದ ನಂತರ ಮಸೂದ್ ಅಜರ್ ತು...