ಭಾರತ, ಮೇ 7 -- 'ಆಪರೇಷನ್ ಸಿಂದೂರ' ಭಾಗವಾಗಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತದ ಕ್ಷಿಪಣಿ ದಾಳಿಯ ನಂತರ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿನ 18 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಧರ್ಮಶಾಲಾ ವಿಮಾನ ನಿಲ್ದಾಣವು ಅವುಗಳಲ್ಲಿ ಒಂದಾಗಿರುವುದರಿಂದ, ಇದು ಐಪಿಎಲ್ ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್​ ಪ್ರಯಾಣದ ಯೋಜನೆಗಳ ಮೇಲೆ ಪರಿಣಾಮ ಬೀರಿದೆ. ಮೇ 11ರಂದು ಇದೇ ಪಟ್ಟಣದಲ್ಲಿ ಮುಂಬೈ ಮತ್ತು ಪಂಜಾಬ್ ಸೆಣಸಾಟ ನಡೆಸಲಿವೆ. ಕ್ರಿಕ್​ಬಜ್​ ವರದಿ ಪ್ರಕಾರ, ಬುಧವಾರ (ಮೇ 7) ಧರ್ಮಶಾಲಾಗೆ ವಿಮಾನ ರದ್ದುಗೊಳಿಸಿದ ಹಿನ್ನೆಲೆ ಎಂಐ ತಂಡವು ಚಿಂತೆಗೊಳಗಾಗಿದೆ.

ಐಪಿಎಲ್​​ನಲ್ಲಿ ಪಂಜಾಬ್ ತನ್ನ 2ನೇ ತವರು ಮೈದಾನವಾಗಿ ಅಳವಡಿಸಿಕೊಂಡಿರುವ ಧರ್ಮಶಾಲಾದಲ್ಲಿ ಈ ಋತುವಿನಲ್ಲಿ ಇನ್ನೂ 2 ಪಂದ್ಯಗಳು ನಡೆಯಲಿವೆ. ಗುರುವಾರ (ಮೇ 8) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮತ್ತು ಮೇ 11 ರಂದು ಮುಂಬೈ ವಿರುದ್ಧ. ಹಿಮಾಚಲ ಪ್ರದೇಶದ ಗಿರಿಧಾಮಕ್ಕೆ ಪ್ರಯಾಣಿಸಲು ಪಂಜಾಬ್ ಯಾವುದೇ ತಕ್ಷಣದ ತ...