Bangalore, ಮೇ 7 -- ಭಾರತೀಯ ಸೇನಾಪಡೆಯ ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಗ್ಗೆ ರಾಜರಾಮ್‌ ತಲ್ಲೂರು ಅವರು ಸೋಷಿಯಲ್‌ ಮೀಡಿಯಾದಲ್ಲಿ ಬರೆದ ಬರಹ ಗಮನ ಸೆಳೆಯುತ್ತದೆ. ತನ್ನ ಕಾರ್ಯಾಚರಣೆಯನ್ನು ಇಷ್ಟೊಂದು ಸ್ಪಷ್ಟತೆಯಿಂದ, ಫಲಿತಾಂಶ ಸಹಿತ ಪ್ರಸ್ತುತಪಡಿಸಿದ ಮತ್ತು ಸೇನೆಯ ಕುರಿತು ದೇಶದ ಜನರ ವಿಶ್ವಾಸವನ್ನು ಮತ್ತೊಮ್ಮೆ ಸಾಬೀತುಪಡಿಸಿದ ಭಾರತೀಯ ಸೇನಾಪಡೆಗಳಿಗೆ "ಸಲ್ಯೂಟ್!" ಎಂದು ಅವರು ಹೇಳಿದ್ದಾರೆ.

ಈ ಡಿಟೇಲಿಂಗ್ - ಇಷ್ಟವಾಯಿತು... ಭಾರತೀಯ ಸೇನೆ ತನ್ನ ಪಾಡಿಗೆ ತನ್ನ ಕೆಲಸವನ್ನು ಬಹಳ ತಂತ್ರಗಾರಿಕೆಯೊಂದಿಗೆ, ನಿಖರವಾಗಿ, ಫಲಿತಾಂಶ ಸಹಿತ ಮಾಡಿ ಮುಗಿಸಿದೆ. ಮಾತ್ರವಲ್ಲ, ತನ್ನ ಈ ಕಾರ್ಯಾಚರಣೆಯ ಬಗ್ಗೆ ದೇಶದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ, ದೇಶದಿಂದ ಹೊರಗೆ ಜಗತ್ತಿಗೆ ಕಳುಹಿಸಬೇಕಾಗಿರುವ ಸಂದೇಶವನ್ನು ಗೊಂದಲಕ್ಕೆಡೆಯಿಲ್ಲದಂತೆ ಕಳುಹಿಸುವಲ್ಲಿ ವಹಿಸಿದ ಎಚ್ಚರ ಕೂಡ ಶ್ಲಾಘನಾರ್ಹ.

ಇಂತಹ ಸೇನಾ ಕಾರ್ಯಾಚರಣೆಯ ಸುದ್ದಿಗಳನ್ನು ಸಾಂಪ್ರದಾಯಿಕವಾಗಿ ನೀಡುವುದು ಭಾರತ ಸರ್ಕಾರದ ರಕ್ಷಣಾ ಇಲಾಖೆ (MoD) ಮತ್ತು...