ಭಾರತ, ಮೇ 7 -- ಆಪರೇಷನ್ ಸಿಂದೂರ್: ಭಾರತದಲ್ಲಿ ವಿಶೇಷವಾಗಿ ಜಮ್ಮು-ಕಾಶ್ಮೀರ ಭಾಗದಲ್ಲಿ ಭಯೋತ್ಪಾದನೆ ನಡೆಸುತ್ತಿದ್ದ ಉಗ್ರರಿಗೆ ತರಬೇತಿ ನೀಡಿದ, ಪ್ರಚೋದಿಸಿ ಕಳುಹಿಸುತ್ತಿದ್ದ 9 ಉಗ್ರ ನೆಲೆಗಳ ಮೇಲೆ ನಡೆಸಿದ ಆಪರೇಷನ್ ಸಿಂದೂರ ಕುರಿತಾದ ಸುದ್ದಿಗೋಷ್ಠಿಯನ್ನು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಭಾರತೀಯ ಸೇನೆ ಕರ್ನಲ್ ಸೋಫಿಯಾ ಖುರೇಶಿ, ವಾಯುಪಡೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ನಡೆಸಿಕೊಟ್ಟರು.

ಪಹಲ್ಗಾಮ್ ದಾಳಿಯಲ್ಲಿ 25 ಭಾರತೀಯರು ಹಾಗೂ ಒಬ್ಬ ನೇಪಾಳಿಯನ್ನು ಹತ್ಯೆ ಮಾಡಿದ ಉಗ್ರರನ್ನು ಮಟ್ಟ ಹಾಕುವುದಕ್ಕಾಗಿ ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತು. ಈ ಕಾರ್ಯಾಚರಣೆಯ ಇಂದು (ಮೇ 7) ನಸುಕಿನ 1.05ಕ್ಕೆ ಶುರುವಾಗಿ 2 ಗಂಟೆ ಒಳಗೆ ಪೂರ್ಣಗೊಂಡಿದೆ ಎಂದು ಸರ್ಕಾರ ತಿಳಿಸಿದೆ.

ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರದ ಭಾಗದಲ್ಲಿ ಉಗ್ರ ನೆಲೆಗಳನ್ನು ಖಚಿತ ಗುಪ್ತಚರ ಮಾಹಿತಿ ಆಧಾರದ ಮೇಲೆ ಗುರುತಿಸಿಕೊಂಡಿರುವ ಭಾರತೀಯ ಸೇನೆ ಅವುಗಳ ವಿವರ ಬಹಿರಂಗಪಡಿಸಿದೆ. ಈ ಪೈಕಿ 9 ಉಗ್ರ...