ಭಾರತ, ಮೇ 7 -- ಆಪರೇಷನ್ ಸಿಂಧೂರ್: ಪಹಲ್ಗಾಮ್‌ ದಾಳಿಯ ವೇಳೆ ಭಾರತೀಯ ಮಹಿಳೆಯರ ಸಿಂಧೂರ ಅಳಿಸಿ ಹಾಕಿದ ಉಗ್ರರ ಮೇಲೆ ಪ್ರತೀಕಾರಕ್ಕೆ ಸಂಬಂಧಿಸಿದ ಆಪರೇಷನ್ ಸಿಂಧೂರ್ ಬಹಳ ವಿಶೇಷ. ಭಾರತೀಯ ಸೇನಾ ಪಡೆಯ ಅಧಿಕೃತ ಸುದ್ದಿಗೋಷ್ಠಿಯನ್ನು ಮಹಿಳಾ ಅಧಿಕಾರಿಗಳೇ ನಡೆಸುತ್ತಿದ್ದು, ಅದರ ವಿವರ ನೀಡುತ್ತಿದ್ದಾರೆ.ಇದರ ನೇರ ಪ್ರಸಾರ ಇಲ್ಲಿದೆ. ಭಾರತೀಯ ಸೇನೆ ಮತ್ತು ವಾಯುಪಡೆಯ ಮಹಿಳಾ ಅಧಿಕಾರಿಗಳು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಆರಂಭದಲ್ಲಿ ಪಹಲ್ಗಾಮ್ ದಾಳಿ ಮತ್ತು ಭಯೋತ್ಪಾದನೆಯ ಹಾನಿಯ ಚಿತ್ರಣ ನೀಡಿ, ಬಳಿಕ ಆಪರೇಷನ್ ಸಿಂಧೂರ ಕುರಿತು ಮಾತನಾಡುವುದಕ್ಕೆ ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಶಿ ಮತ್ತು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್‌ ಅವರನ್ನು ಆಹ್ವಾನಿಸಿದರು.

ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಶಿ ಮತ್ತು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್‌ ಅವರು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಜಮ್ಮು - ಕಾ...