ಭಾರತ, ಮೇ 7 -- ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತವು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಆಪರೇಷನ್ ಸಿಂಧೂರ ಹೆಸರಿನಲ್ಲಿ ನಡೆದ ಈ ಕಾರ್ಯಾಚರಣೆಯ ಕುರಿತು ಮಾಧ್ಯಮಗಳಿಗೆ ವಿವರಣೆ ನೀಡಿದ್ದು ಮಹಿಳಾ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ. ಯಾರು ಈ ಸೋಷಿಯಾ ಖುರೇಷಿ ಇವರ ಹಿನ್ನೆಲೆಯೇನು ನೋಡಿ.

ಭಾರತೀಯ ಸೇನೆಯ ಕಾರ್ಫ್ಸ್ ಆಫ್ ಸಿಗ್ನಲ್ಸ್‌ನ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ, ಏಷ್ಯಾ ಸೇರಿದಂತೆ ಹಲವು ದೇಶಗಳನ್ನೊಳಗೊಂಡ ಬಹುರಾಷ್ಟ್ರೀಯ ಕ್ಷೇತ್ರ ಫೋರ್ಸ್ 18ರಲ್ಲಿ ಭಾರತೀಯ ಸೇನಾ ತರಬೇತಿ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1990ರಲ್ಲಿ ಸೇನೆಗೆ ನಿಯೋಜಿತರಾದ ಖುರೇಷಿ, ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಗಮನಾರ್ಹ ಅನುಭವ ಹೊಂದಿದ್ದಾರೆ. ಅಲ್ಲದೆ 2006ರಲ್ಲಿ ಕಾಂಗೋದಲ್ಲಿ ಭಾರತೀಯ ಕಾರ್ಯಾಚರಣೆಯ ಭಾಗವಾಗಿದ್ದರು.

18 ರಾಷ್ಟ್ರಗಳು ಭಾಗವಹಿಸಿದ್ದ ಸೇನಾ ತುಕಡಿಯನ್ನು ಮುನ್ನೆಡಿಸಿದ ಮಹಿಳಾ ಅಧ...