Bangalore, ಮೇ 8 -- ʼಜೀವಕ್ಕೂ ಹೆಚ್ಚು ಪ್ರೀತಿಸುತ್ತಿದ್ದ ನನ್ನ ಸಹೋದರಿಯನ್ನು ಕೊಂದಿದ್ದಾನೆ. ಸಣ್ಣ ಮಗುವನ್ನು ಕೂಡ ಬಿಟ್ಟಿಲ್ಲ. ಅವಳ ಬದಲಿಗೆ ನಾನೇ ಸಾಯಬಾರದಿತ್ತೆ. ನನಗಾಗಿರುವ ದುಃಖವನ್ನು ವಿವರಸಲಾಗುತ್ತಿಲ್ಲʼ. ಇಂತಹ ಸಾಲುಗಳನ್ನು ಭಾರತದ ಮಾಧ್ಯಮಗಳಲ್ಲಿ ದಶಕಗಳ ಕಾಲ ಓದಿಕೊಂಡು, ಕೇಳಿಸಿಕೊಂಡು ಬಂದಿದ್ದೇವೆ. ಆದರೆ ಪಾಕಿಸ್ತಾನದೊಳಗೆ ಕುಳಿತ ರಾಕ್ಷಸರ ವಿರುದ್ಧ ಭಾರತದ ವೀರ ಯೋಧನ ಪಾಲಕರು ಅಥವಾ ಸಾಮಾನ್ಯ ಜನರು ಈ ರೀತಿ ಕಣ್ಣೀರಿನ ಕೋಡಿ ಹರಿಸುತ್ತಿದ್ದರು. ಇದನ್ನು ಕೇಳಿಸಿಕೊಂಡು ನಮ್ಮ ಪಿತ್ತವನ್ನು ನೆತ್ತಿಗೇರಿಸಿಕೊಂಡು ದಿನ ದೂಡುವುದೇ ಭಾರತೀಯರ ಕಾಯಕವಾಗಿತ್ತು. ಆದರೆ ಇಂದು ಓರ್ವ ಜಾಗತಿಕ ಉಗ್ರ ರಾಕ್ಷಸನಿಂದ ಇಂತಹ ಹೇಳಿಕೆ ಬಂದಾಗ, ರೋಮಾಂಚನವಾಯಿತು. ಈ ಮಾತು ಹೇಳಿದ್ದು ಮತ್ಯಾರೂ ಅಲ್ಲ. ಭಾರತದ ಮೇಲೆ ಅದೆಷ್ಟೋ ದಾಳಿಗೆ ಸಂಚು ರೂಪಿಸಿ, ಸಾವಿರಾರು ಕುಟುಂಬಗಳ ನಗುವನ್ನು ಕಸಿದುಕೊಂಡ ನರರಾಕ್ಷಸ ಅಝರ್‌ ಮಸೂದ್‌ಗೆ ಇಂದು ಮಕ್ಕಳು, ಸಂಬಂಧಿಕರು, ಒಡಹುಟ್ಟಿದವರ ಸಾವಿನ ಬೆಲೆ ಗೊತ್ತಾಗಿದೆ. ಮೋದಿಯನ್ನು ಉದ್ದೇಶಿಸಿ ಮ...