Delhi, ಮೇ 12 -- ದೆಹಲಿ: ಪಾಕಿಸ್ತಾನದ ನಡೆಸಿದ ದಾಳಿ, ಭಯೋತ್ಪಾದನೆ ಚಟುವಟಿಕೆ ವಿರುದ್ದ ನಮ್ಮ ದಾಳಿ ನಿಂತಿಲ್ಲ. ಈಗಾಗಲೇ ಆಪರೇಷನ್‌ ಸಿಂದೂರ್‌ ಹೆಸರಲ್ಲಿ ತಕ್ಕ ಉತ್ತರ ಕೊಟ್ಟಿದ್ದೇವೆ. ಯಾವುದೇ ಅಣ್ವಸ್ತ್ರ ಬೆದರಿಕೆಗೆ ನಾವು ಜಗ್ಗುವುದಿಲ್ಲ. ಎಲ್ಲದಕ್ಕೂ ಉತ್ತರ ನೀಡುವ ಶಕ್ತಿ ನಮ್ಮಲ್ಲಿದೆ. ಮೇಕ್‌ ಇನ್‌ ಇಂಡಿಯಾ ಅಡಿ ನಾವೇ ರಕ್ಷಣೆ ವಿಚಾರದಲ್ಲಿ ಸಶಕ್ತರಾಗಿದ್ದೇವೆ. ಪಾಕಿಸ್ತಾನಕ್ಕೆ ಬೆಂಬಲಿಸಿದರೆ ಭಯೋತ್ಪಾದನೆ ಬೆಂಬಲಿಸದ ಹಾಗೆ ಎಂದು ವಿಶ್ವದ ಇತರೆ ದೇಶಗಳೂ ಅರಿತುಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಉದ್ದೇಶಿಸಿ ನೀಡಿದ ನಿಖರ ಸಂದೇಶವಿದು.

ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆಸಿದ ದಾಳಿಯ ಘಟನೆ ನಂತರ ಪಾಕಿಸ್ತಾನ ಹಾಗೂ ಭಾರತದ ನಡುವೆ ದಾಳಿ ಪ್ರತಿದಾಳಿಗಳು ನಡೆದಿವೆ. ಪಾಕಿಸ್ತಾನದ ಉಗ್ರರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿರುವ ಭಾರತ ಸೂಕ್ತ ಉತ್ತರ ನೀಡಿದೆ. ಇದರೊಟ್ಟಿಗೆ ಕದನ ವಿರಾಮದಂತಹ ಚಟುವಟಿಕೆಗಳು ನಡೆದರೂ ಯಾವುದೂ ಪರಿ...