Bangalore, ಮೇ 21 -- ಬೆಂಗಳೂರು: ನೆರೆಯ ಆಂಧ್ರಪ್ರದೇಶದ ಬೇಡಿಕೆಯಂತೆ ಕರ್ನಾಟಕದಿಂದ ನಾಲ್ಕು ಸಾಕಾನೆಗಳನ್ನು ಬುಧವಾರ ಹಸ್ತಾಂತರಿಸಲಾಯಿತು. ಕರ್ನಾಟಕದ ವಿವಿಧ ಅರಣ್ಯ ಪ್ರದೇಶದ ಶಿಬಿರಗಳಲ್ಲಿ ಬೀಡು ಬಿಟ್ಟಿರುವ ಸಾಕಾನೆಗಳನ್ನು ಖುದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತಿತರರು ವಿಧಾನಸೌಧ ಎದುರು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯೂ ಆಗಿರುವ ಅರಣ್ಯ ಸಚಿವ ಪವನ್‌ ಕಲ್ಯಾಣ್‌ ಅವರಿಗೆ ಹಸ್ತಾಂತರಿಸಿದರು. ಮೈಸೂರು ದಸರಾ ಮೆರವಣಿಗೆ ನೆನಪಿಸುವ ಹಾಗೆ ಆನೆಗಳ ಕಿರು ಮೆರವಣಿಗೆ, ಪುಷ್ಪಾರ್ಚನೆ,ಪೂಜೆಗಳು ಅಲ್ಲಿ ನಡೆದು ಕಳೆಗಟ್ಟಿಸಿದವು. ಆಂಧ್ರಕ್ಕೆ ಹೊರಟಿರುವ ತಂಡದಲ್ಲಿ ಅಭಿಮನ್ಯು ಕೂಡ ಇದ್ದಾನೆ. ಆದರೆ ಈತ ಮೈಸೂರು ದಸರಾ ಅಂಬಾರಿ ಹೊರುವ ಅಭಿಮನ್ಯು ಅಲ್ಲ ಎನ್ನುವ ಸ್ಪಷ್ಟನೆಯನ್ನು ಅರಣ್ಯ ಇಲಾಖೆಯವರೇ ನೀಡಿದರು.

ಈತ ಜೂನಿಯರ್‌ ಅಭಿಮನ್ಯು. ಸದ್ಯ ಶಿವಮೊಗ್ಗ ಸಮೀಪದ ಸಕ್ರೇಬೈಲ್‌ ಆನೆ ಶಿಬಿರದ ನಿವಾಸಿಯಾಗಿದ್ದ. ಎರಡು ವರ್ಷದಿಂದ ಕಾಡಿನಿಂದ ತಪ್...