ಭಾರತ, ಮೇ 25 -- ಪಶ್ಚಿಮ ಬಂಗಾಳದ ಮೇದಿನಪುರ ಜಿಲ್ಲೆಯಲ್ಲಿ ಬಾಲಕನೊಬ್ಬ ತನ್ನ ಮೇಲೆ ಕಳ್ಳತನದ ಆರೋಪ ಬಂದಿದೆ ಎನ್ನುವ ಕಾರಣಕ್ಕೆ ಅಮ್ಮನಿಗೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಕೇವಲ 15 ರೂ ಚಿಪ್ಸ್ ಪ್ಯಾಕೇಟ್ ಕದಿದ್ದಾನೆಂದು ಆ ಹುಡುಗನ ಮೇಲೆ ಆರೋಪ ಮಾಡಿರಲಾಗುತ್ತದೆ. ಇದರಿಂದ ಮನನೊಂದ ಆತ ಅಮ್ಮಾ ನಾನು ಕದ್ದಿಲ್ಲಮ್ಮ ಎಂದು ಪತ್ರ ಬರೆದು ಸಾವಿಗೆ ಶರಣಾಗುತ್ತಾನೆ. ಈ ಘಟನೆಗೆ ಸಂಬಂಧಿಸಿ ಆಪ್ತಸಮಾಲೋಚಕ ವಸಂತ ನಡಹಳ್ಳಿ ಪೋಷಕರು ಮಕ್ಕಳ ವಿಚಾರದಲ್ಲಿ ನಡೆದುಕೊಳ್ಳಬೇಕಾದ ರೀತಿಯ ಬಗ್ಗೆ ವಿವರಿಸಿದ್ದಾರೆ. ಅವರ ಈ ಬರಹ ಪ್ರತಿಯೊಬ್ಬರ ಪೋಷಕರಿಗೂ ಪಾಠದಂತಿದೆ. ಇದನ್ನು ನೀವೂ ಓದಿ.

'ಅಮ್ಮಾ ನಾನು ಕಳ್ಳನಲ್ಲ, ಕಳ್ಳತನ ಮಾಡಿಲ್ಲ' ಕಳ್ಳತನದ ಆರೋಪ ಹೊತ್ತ ಬಾಲಕ ಆತ್ಮಹತ್ಯೆಗೆ ಮೊದಲು ಬರೆದಿಟ್ಟ ಪತ್ರದ ಸಾಲುಗಳು ಇವು. ಬಾಲಕ ಕಳ್ಳತನ ಮಾಡಿಲ್ಲ ಎನ್ನುವುದನ್ನು ತಾಯಿಯೂ ನಂಬಿರಲಾರಳು. ಮಗ ಸುಳ್ಳು ಹೇಳಿರುತ್ತಾನೆ ಎಂದು ಅವಳು ನಂಬಿರುವ ಸಾಧ್ಯತೆಗಳು ಹೆಚ್ಚು. ಜೀವನದ ಪ್ರಥಮ ಮತ್ತು ಅತ್ಯಂತ ನಂಬಲಾರ್ಹ ಆಸರೆಯಾಗಿರುವ ತಾಯಿ ...