ಭಾರತ, ಮೇ 15 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 14ರ ಸಂಚಿಕೆಯಲ್ಲಿ ಕಾಂತಮ್ಮ-ಸುಂದರ ಸೇರಿ ಹೇಗಾದರೂ ಸುಬ್ಬು ಬಳಿ ಮಿನಿಸ್ಟರ್‌ ಇನ್ಲ್ಫುಯೆನ್ಸ್‌ನಲ್ಲಿ ಅಥವಾ ಮಿನಿಸ್ಟರ್‌ ಮನೆಯಲ್ಲಿ ಕೆಲಸ ಕೊಡಿಸುವಂತೆ ಕೇಳಬೇಕು ಎಂದು ನಿರ್ಧಾರ ಮಾಡುತ್ತಾರೆ. ಅದಕ್ಕೆ ಮತ್ತೆ ಸುಬ್ಬುವನ್ನು ಹಾಲ್‌ಗೆ ಕರೆಯುತ್ತಾರೆ. ಮನೆಯವರೆಲ್ಲಾ ಹಾಲ್‌ಗೆ ಬಂದಾಗ ಸುಂದರ ಸುಬ್ಬು ಮುಂದೆ ತನ್ನ ಬೇಡಿಕೆ ಇಡುತ್ತಾನೆ. ಹೇಗಾದರೂ ನೀವು ಮಿನಿಸ್ಟರ್‌ ಜೊತೆ ಮಾತನಾಡಿ ನನಗೊಂದು ಕೆಲಸ ಕೊಡಿಸು ಎಂದು ಕೇಳಿಕೊಳ್ಳುತ್ತಾನೆ. ಆರಂಭದಲ್ಲಿ ಇದಕ್ಕೆ ವಿರೋಧಿಸುವ ಧನಲಕ್ಷ್ಮೀ ಆಮೇಲೆ ಆ ದಿಸೆಯಿಂದಲಾದ್ರೂ ತನ್ನ ಗಂಡನಿಗೆ ಒಂದು ಕೆಲಸ ಸಿಗಲಿ ಎಂದು ಬಯಸುತ್ತಾಳೆ. ಆದರೆ ಶ್ರಾವಣಿ ಇಲ್ಲ ಆಗೊಲ್ಲ, ಅಪ್ಪನ ಜೊತೆ ನಿಮಗೆ ಕೆಲಸ ಸಿಗೊಲ್ಲ ಎಂದು ಕೋಪದಲ್ಲಿ ಹೇಳುತ್ತಾಳೆ. ಅವಳ ಮಾತು ಕೇಳಿ ಧನಲಕ್ಷ್ಮೀ ಸಿಡಿದೇಳುತ್ತಾಳೆ.

ತನ್ನ ಅಪ್ಪನ ಮನೆಯಲ್ಲಿ ಸುಂದರ ಕೆಲಸ ಬೇಕು ಎಂದು ಹೇಳುತ್ತಿರುವುದು ಶ್ರಾವಣಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ಸುಂದರ ಬುದ್ಧಿ ಗೊತ್ತಿರುವ ಶ್ರಾ...