ಭಾರತ, ಮೇ 16 -- ಅಮೃತಧಾರೆ ಧಾರಾವಾಹಿ: ಸೃಜನ್‌ ಮತ್ತು ಲಚ್ಚಿ ಮಾತನಾಡುತ್ತಿದ್ದಾರೆ. ಮೊಬೈಲ್‌ ಫೋನ್‌ ನೋಡಿದರೆ ಕಣ್ಣು ಹಾಳಾಗುತ್ತದೆ ಎಂದು ಸೃಜನ್‌ ಮಗುವಿಗೆ ಸಲಹೆ ನೀಡುತ್ತಾನೆ. ಆಕೆ ಸರಿ ಅಂಕಲ್‌ ಎನ್ನುತ್ತಾಳೆ. ಅಂಕಲ್‌ ಅನ್ನಬೇಡ, ಮನಸ್ಸಿಗೆ ಬೇಜಾರು ಆಗುತ್ತದೆ ಎನ್ನುತ್ತಾನೆ. "ಇನ್ಮೆಲೆ ಫ್ರೆಂಡ್‌ ಅಂತ ಕರೀತಿನಿ" ಎನ್ನುತ್ತಾಳೆ. "ನಿನ್ನೆ ರಾತ್ರಿ ಅಜ್ಜಿ ಹೆಂಗೆಂಗೋ ಆಡ್ತಾ ಇದ್ರು. ಅಜ್ಜಿನ ಎಲ್ಲಿಗೋ ಕರೆದುಕೊಂಡು ಹೋದ್ರು" ಪುಟ್ಟಿ ಹೇಳುತ್ತಾಳೆ. ಆಗ ಸುಧಾ ಅಲ್ಲಿಗೆ ಬರುತ್ತಾಳೆ. "ಸಿಕ್ಕಸಿಕ್ಕವರಲ್ಲಿ ಮನೆಯ ವಿಷಯ ಹೇಳಬಾರದು" ಎನ್ನುತ್ತಾಳೆ. "ನನಗ್ಯಾಕೆ ಕಂಡಕಂಡವರ ವಿಷಯ. ನನ್ನೊಳಗೂ ಬೇಕಾದ್ದಷ್ಟು ವಿಷಯಗಳಿವೆ" ಎನ್ನುತ್ತಾನೆ. "ಇವರು ನನ್ನ ಫ್ರೆಂಡ್‌, ಇವರಿಗೆ ಬಯ್ಯಬಾರದು" ಎನ್ನುತ್ತಾಳೆ. "ಇನ್ಮುಂದೆ ಬಯ್ಯೋಲ್ಲ. ನಿನ್ನ ಮುಖ ನೋಡಿ ಸುಮ್ಮನಿರ್ತೀನಿ" ಎನ್ನುತ್ತಾಳೆ. "ಹೆಸರುಕಾಳು ಮೇಡಂ ನನಗೆ ಬಯ್ಯೋದನ್ನೇ ಹಾಬಿ ಮಾಡಿಕೊಂಡಿದ್ದಾರೆ" ಎಂದುಕೊಳ್ಳುತ್ತಾನೆ ಸೃಜನ್‌.

ಮಲ್ಲಿ ಮತ್ತು ಜೈದೇವ್‌ ಮಾತನಾಡುತ್ತಾರೆ...