ಭಾರತ, ಮೇ 2 -- ಅಮೃತಧಾರೆ ಧಾರಾವಾಹಿಯ ಪ್ರೊಮೊವನ್ನು ಜೀ ಕನ್ನಡ ಸೋಷಿಯಲ್‌ ಮೀಡಿಯಾದಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ಸೃಜನ್‌ ಮತ್ತು ಸುಧಾರ ನಡುವೆ ಉತ್ತಮ ಸಂಭಾಷಣೆ ನಡೆದಿರುವುದು ಕಾಣಿಸಿದೆ. ಇಲ್ಲಿಯವರೆಗೆ ಸೃಜನ್‌ನನ್ನು ಸುಧಾ ಅನುಮಾನದಿಂದ ನೋಡುತ್ತಿದ್ದಳು.

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ ತಂಗಿಯಾಗಿ ಸುಧಾ ಇದ್ದಾರೆ. ಮಿಸ್‌ ಆಗಿದ್ದ ತಂಗಿ ಮತ್ತು ಅಮ್ಮ ಗೌತಮ್‌ಗೆ ಹಲವು ಸಂಚಿಕೆಗಳ ಹಿಂದೆ ದೊರಕಿದ್ದರು. ಬಳಿಕ ಇವರನ್ನು ಪತ್ತೆಹಚ್ಚಿ ಮನೆಗೆ ಗೌತಮ್‌ ಕರೆಸಿಕೊಂಡಿದ್ದರು.

ಸುಧಾಳಿಗೆ ಲಚ್ಚಿ ಎಂಬ ಪುಟಾಣಿ ಮಗಳಿದ್ದಾಳೆ. ಇತ್ತೀಚೆಗೆ ಸುಧಾ, ಲಚ್ಚಿ, ಭೂಮಿಕಾಳಿಗೆ ಆಕ್ಸಿಡೆಂಟ್‌ ಮಾಡಲು ಜೈದೇವ್‌‌‌‌ ಪ್ಲ್ಯಾನ್‌ ಮಾಡಿದ್ದನು. ಸಕಾಲದಲ್ಲಿ ಅಲ್ಲಿಗೆ ಆಗಮಿಸಿ ಮಾತಿನ ಮಲ್ಲ ಸೃಜನ್‌ ಇವರೆಲ್ಲರನ್ನೂ ಕಾಪಾಡಿದ್ದನು.

ಬಳಿಕ ಸೃಜನ್‌ಗೆ ಭೂಮಿಕಾ ಅವರು ಗೌತಮ್‌ ಕಂಪನಿಯಲ್ಲಿ ಕೆಲಸ ಕೊಡಿಸಿದ್ದರು. ಜತೆಗೆ, ಮೈಕ್‌ ರಹಸ್ಯ ಕಂಡು ಹಿಡಿಯಲು ಸೃಜನ್‌ ಮೂಲಕ ಪ್ರಯತ್ನಿಸಿದ್ದರು. ಈ ಎಲ್ಲಾ ಸಮಯದಲ್ಲಿಯೂ ಸೃಜನ್‌ ಬಗ್ಗ...