Bangalore, ಮೇ 26 -- ಅಮೃತಧಾರೆ ಧಾರಾವಾಹಿ: ಆನಂದ್‌ ಮತ್ತು ನಂಜಮ್ಮನ ಪತಿ ಮಾತನಾಡುತ್ತಾರೆ. "ಪಂಕಜಾಳಿಗೆ ಒಬ್ಬಳು ತಂಗಿ ಇದ್ದಳು ಅಲ್ವಾ?" ಎಂದು ಆನಂದ್‌ ಕೇಳುತ್ತಾನೆ. "ತಪ್ಪು ಮಾಹಿತಿ... ಸರಿಯಾದ ಮಾಹಿತಿ ನಾನು ನೀಡುವೆ" ಎಂದು ಎಣ್ಣೆಯ ಅಮಲಿನಲ್ಲಿ ತಾತಾ ಹೇಳುತ್ತಾರೆ. "ಪಂಕಜಾಳಿಗೆ ತಂಗಿ- ತಮ್ಮ ಇಲ್ಲ, ಅಣ್ಣಾ ಇದ್ದ. ಅಣ್ಣನ ಹೆಸರು ಕಾಂತಾ... ಕಿತಾಪತಿ ಕಾಂತ..." ಎನ್ನುತ್ತಾರೆ. ಈ ಊರಲ್ಲಿ ಅವರು ಏನು ಮಾಡಿಕೊಂಡಿದ್ರು ಎಂದು ಆನಂದ ಕೇಳುತ್ತಾನೆ. "ಅವರು ಇದೇ ಊರಿನಲ್ಲಿದ್ರು... " ಎಂದು ತಾತಾ ಪಂಕಜಾಳ ಕಥೆ ಹೇಳುತ್ತಾನೆ. "ಬೇಸಿಕಲಿ ನಾವು ರಾಯಲ್‌ ಫ್ಯಾಮಲಿಯವರು" ಎಂದು ಶಕುಂತಲಾದೇವಿ ಇತ್ತೀಚೆಗೆ ಹೇಳಿದ್ದು ಆನಂದ್‌ಗೆ ನೆನಪಾಗುತ್ತದೆ.

ಇನ್ನೊಂದೆಡೆ ಶಕುಂತಲಾದೇವಿ ಮತ್ತು ಲಕ್ಕಿ ಲಕ್ಷ್ಮಿಕಾಂತ್‌ ಟೆನ್ಷನ್‌ನಲ್ಲಿದ್ದಾರೆ. ನಂಜಮ್ಮನ ಗಂಡ ಎಲ್ಲಾ ವಿವರ ಬಾಯಿ ಬಿಡ್ತಾರ ಎಂಬ ಸಂದೇಹದಲ್ಲಿ ಅವರು ಭಯಪಡುತ್ತಿದ್ದಾರೆ. ಇನ್ನೊಂದೆಡೆ ನಂಜಮ್ಮ ಕೂಡ ತನ್ನ ಗಂಡನ ಹುಡುಕುತ್ತಾಳೆ. ಎಲ್ಲಿಯೂ ಸಿಗುವುದಿಲ್ಲ. ಆಗ ಶಕುಂತಲಾದೇವ...