ಭಾರತ, ಮೇ 4 -- ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊವನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಇದರಲ್ಲಿ ಹಲವು ವಿಷಯಗಳು ಜಾಹೀರಾಗಿವೆ. ಮುಖ್ಯವಾಗಿ ಕೌಟುಂಬಿಕ ಕಾರಣ ನೀಡಿ ಆನಂದ್‌ ಕೆಲಸಕ್ಕೆ ರಾಜೀನಾಮೆ ನೀಡುತ್ತಾನೆ. ಹೌದು, ಆನಂದ್‌ ರಾಜೀನಾಮೆ ಪತ್ರವನ್ನು ಗೌತಮ್‌ಗೆ ನೀಡುತ್ತಾನೆ. ಸಾಂಸಾರಿಕ ಕಾರಣ ನೀಡಿ ಈ ರಾಜೀನಾಮೆ ನೀಡುತ್ತಾನೆ. ಹೀಗಾಗಿ ಗೌತಮ್‌ಗೆ ಏನೂ ಹೇಳಲಾಗುವುದಿಲ್ಲ. ಗೆಳೆಯನನ್ನು ಅಪ್ಪಿಕೊಂಡು ಭಾವುಕನಾಗುತ್ತಾನೆ.

ಆದರೆ, ರಾಜೀನಾಮೆಗೆ ಕಾರಣ ಜೈದೇವ್‌ ಎಂಬ ವಿಚಾರವನ್ನು ಹೇಳುವುದಿಲ್ಲ. ಈ ರಾಜೀನಾಮೆ ನಾಟಕದ ಹಿಂದೆ ಬೇರೆ ಏನಾದರೂ ಕಾರಣ ಇರಬಹುದೇ? ಆನಂದ್‌‌ ಮತ್ತು ಅಪರ್ಣಾ ಪಾತ್ರವನ್ನು ಕೊನೆಗೊಳಿಸುವ ಉದ್ದೇಶ ಇರಬಹುದೇ ಎಂಬ ಕುತೂಹಲವೂ ಸೀರಿಯಲ್‌ ವೀಕ್ಷಕರ ಮನದಲ್ಲಿ ಮೂಡಿದೆ. ಏಕೆಂದರೆ, ಆನಂದ್‌ ಈಗ ತಮಿಳು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.

ಅಥವಾ ಜೈದೇವ್‌ ಮಾಡಿರುವ ಈ ಜಾಬ್‌ ಕಟ್‌ ಸದ್ಯದಲ್ಲಿಯೇ ಗೌತಮ್‌ಗೆ ತಿಳಿಯಲಿದ್ದು, ಮತ್ತೆ ಕೆಲಸ ಕಳೆದುಕೊಂಡವರೆಲ್ಲ ವಾಪಸ್‌ ಬರಬಹುದು ಎಂಬ ನಿರ...