Bangalore, ಮೇ 7 -- ಅಮೃತಧಾರೆ ಧಾರಾವಾಹಿಯ ನೆಗೆಟಿವ್‌ ಪಾತ್ರ "ಜೈದೇವ್‌"ಗೆ ಟೈಂ ಸರಿಯಾಗಿರುವ ಸಮಯವೇ ಇಲ್ಲ. ಆತ ಮಾಡಿದ ಪ್ಲ್ಯಾನ್‌ಗಳೆಲ್ಲವೂ ಠುಸ್‌ ಆಗುತ್ತವೆ. ಗೌತಮ್‌ ಅಥವಾ ಭೂಮಿಕಾ ಎದಿರು ಈತ ಮಾಡಿದ ಯೋಜನೆಗಳು ವಿಫಲವಾಗುತ್ತಿವೆ. ಅಮೃತಧಾರೆ ಧಾರಾವಾಹಿಯ ಇತ್ತೀಚಿನ ಹಲವು ಸಂಚಿಕೆಗಳಲ್ಲಿನ ಜೈದೇವನ ಪ್ಲಾಪ್‌ ಶೋಗಳನ್ನು ನೆನಪಿಸಿಕೊಳ್ಳೋಣ ಬನ್ನಿ.

ಪ್ಲಾಪ್‌ ಶೋ 1: ತನಗೆ ಪ್ರಮೋಷನ್‌ ದೊರಕಿದ ಬಳಿಕ ಆನಂದ್‌ ಸೇರಿದಂತೆ ಹಲವು ಸೀನಿಯರ್‌ಗಳ ಉದ್ಯೋಗ ಕಡಿತ ಮಾಡುತ್ತಾನೆ. ಈ ವಿಷಯ ಆನಂದ್‌ಗೆ ಗೊತ್ತಾಗಿ "ಕಂಪನಿಯ ಬಾಸ್‌ ನೀನಾ ನಾನಾ" ಎಂದು ಗದರಿಸಿ ಎಲ್ಲರಿಗೂ ಬೋನಸ್‌ ನೀಡಿ ಕೆಲಸಕ್ಕೆ ವಾಪಸ್‌ ತೆಗೆದುಕೊಳ್ಳುತ್ತಾನೆ.

ಪ್ಲಾಪ್‌ ಶೋ 2: ಭಾಗ್ಯಮ್ಮ‌, ಲಚ್ಚಿ, ಸುಧಾ ಮತ್ತು ಭೂಮಿಕಾಳನ್ನು ಕಾರು ಗುದ್ದಿಸಿ ಕೊಲೆ ಮಾಡಲು ಯತ್ನಿಸಿದ. ಆ ಸಮಯದಲ್ಲಿ ಸೃಜನ್‌ ಬಂದು ಕಾಪಾಡಿದ. ಜೈದೇವ್‌ ಪ್ಲ್ಯಾನ್‌ ಠುಸ್ಸಾಯ್ತು.

ಪ್ಲಾಪ್‌ ಶೋ 3: ಇತ್ತೀಚೆಗೆ ಲಚ್ಚಿಯನ್ನು ಕಿಡ್ನ್ಯಾಪ್‌ ಮಾಡಿದ್ದ ಜೈದೇವನ ಪ್ಲ್ಯಾನ್‌ ಕೂಡ ಠುಸ್‌ ಆಗಿತ್ತ...