Bangalore, ಮೇ 17 -- ಅಮೃತಧಾರೆ ಧಾರಾವಾಹಿಯಲ್ಲಿ ಕೆಲವು ಸಂಚಿಕೆಗಳ ಹಿಂದೆ ಭೂಮಿಕಾಗೆ ಪಂಕಜಾ ಎಂಬವರ ಜನನ ಪ್ರಮಾಣಪತ್ರ ದೊರಕಿತ್ತು. ಪಂಕಜಾ ಮತ್ತು ಶಕುಂತಲಾದೇವಿ ಇಬ್ಬರೂ ಒಬ್ಬರೆಯೇ ಎಂಬ ಸಂದೇಹ ಭೂಮಿಕಾಗೆ ಬಂದಿತ್ತು.

ಬಳಿಕ ಭೂಮಿಕಾ ಮತ್ತು ಆನಂದ್‌ ರಹಸ್ಯ ಕಂಡುಹಿಡಿಯಲು ಬೇರೆ ಹಾದಿ ಹಿಡಿಯುತ್ತಾರೆ. ಪಂಕಜಾಳ ಜನನ ಪ್ರಮಾಣಪತ್ರದಲ್ಲಿದ್ದ ಊರಿನವರನ್ನು ಸಂಪರ್ಕಿಸಲು ಯತ್ನಿಸುತ್ತಾರೆ. ಗ್ರಾಮ ಪಂಚಾಯತಿಯ ಅಕೌಂಟೆಂಟ್‌ ಒಬ್ಬರು ಸಹಾಯ ಮಾಡುತ್ತಾರೆ.

ಊರಲ್ಲಿದ್ದ ಹಳ್ಳಿ ಹೆಂಗಸು "ನನಗೆ ಪಂಕಜಾ ಗೊತ್ತು" ಎನ್ನುತ್ತಾರೆ. ಬಳಿಕ ಗೌತಮ್‌ ಮನೆಗೆ ಕಾಲ್‌ ಮಾಡುತ್ತಾಳೆ. ಪಂಕಜಾ ಎನ್ನುವವರು ಇಲ್ಲಾ ಎಂದು ಕಾಲ್‌ ರಿಸೀವ್‌ ಮಾಡಿದ ಅಜ್ಜಿ ಹೇಳುತ್ತಾರೆ. ದೊಡ್ಡ ಮನೆಗೆ ಶಕುಂತಲಾ ಹೆಸರಿನಲ್ಲಿ ಪಂಕಜಾ ಸೇರಿಕೊಂಡಿರುವುದು ಗೊತ್ತಾಗುತ್ತದೆ.

ಇಂದಿನ ಸಂಚಿಕೆಯಲ್ಲಿ ಹಳ್ಳಿ ಹೆಂಗಸು ಮತ್ತೆ ಕಾಲ್‌ ಮಾಡಿ ಶಕುಂತಲಾದೇವಿ ಜತೆ ಮಾತನಾಡಿದ್ದಾರೆ. ಅದೇ ಫೋನ್‌ನ ಇನ್ನೊಂದು ರಿಸೀವರ್‌ ಮೂಲಕ ಭೂಮಿಕಾ ಹಳ್ಳಿ ಹೆಂಗಸಿನ ಮಾತುಗಳನ್ನು ಕೇಳಿಸಿಕೊಂಡ...