ಭಾರತ, ಮೇ 18 -- ಜೀ ಕನ್ನಡವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಪಂಕಜಾಳ ರಹಸ್ಯದ ಎಪಿಸೋಡ್‌ಗಳು ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದೆ. ಹಲವು ದಿನಗಳಿಂದ ಹೊಸತನ ಇಲ್ಲದೆ ಬೋರಿಂಗ್‌ ಹೊಡೆಸುತ್ತಿದ್ದ ಸೀರಿಯಲ್‌ ಅನ್ನು ಮತ್ತೆ ಹಳಿಗೆ ತರಲು ನಿರ್ದೇಶಕರು ತರಲು ಸೀರಿಯಲ್‌ ನಿರ್ದೇಶಕರು ಪ್ರಯತ್ನಿಸಿದಂತೆ ಇದೆ. ಬನ್ನಿ ಪಂಕಜಾಳ ರಹಸ್ಯ ತಿಳಿಯಲು ಗೌತಮ್‌ ಹೇಗೆ ಜೊತೆಯಾಗ್ತಾರೆ ತಿಳಿಯೋಣ.

ಭೂಮಿಕಾಗೆ ಶಕುಂತಲಾ ಕೊಠಡಿಯಲ್ಲಿ ಪಂಕಜಾ ಎಂಬವರ ಜನನ ಪ್ರಮಾಣ ಪತ್ರ ದೊರಕಿತ್ತು. ಈ ರಹಸ್ಯ ತಿಳಿಯಲು ಆ ಸರ್ಟಿಫಿಕೇಟ್‌ನಲ್ಲಿದ್ದ ಊರಿನ ಗ್ರಾಮ ಪಂಚಾಯಿತಿಯ ಉದ್ಯೋಗಿಯನ್ನು ಕನೆಕ್ಟ್‌ ಆಗಿದ್ದರು. ಅಲ್ಲಿ ಹಳ್ಳಿ ಹೆಂಗಸೊಬ್ಬಳು ನನಗೆ ಪಂಕಜಾ ಗೊತ್ತಿದ್ದಾಳೆ ಎಂದಿದ್ದಳು.

ಆ ಹಳ್ಳಿ ಹೆಂಗಸರು ಗೌತಮ್‌ ಮನೆಗೆ ಕಾಲ್‌ ಮಾಡಿದ್ದಳು. ಶಕುಂತಲಾದೇವಿ ಬಳಿ ನನಗೆ ಎಲ್ಲಾ ಗೊತ್ತು, ಯಾರಿಗೂ ಹೇಳಬಾರದು ಎಂದರೆ ನನಗೆ ಹಣ ಬೇಕು ಎಂದು ಬ್ಲ್ಯಾಕ್‌ ಮೇಲ್‌ ಮಾಡುತ್ತಾಳೆ. ಅವಳನ್ನು ಕನಕಪುರದ ಹತ್ತಿರವಿರುವ ಕಾಪಿಶಾಪ್‌ಗೆ ಶಕುಂತಲಾದೇವಿ ಬರಲು ಹೇಳುತ್ತಾರೆ....