ಭಾರತ, ಮಾರ್ಚ್ 22 -- ಬೆಂಗಳೂರು: ಬೆಂಗಳೂರು ಗ್ರಾಮಾಂತರ ವ್ಯಾಪ್ತಿಗೆ ಬರುವ ಆನೇಕಲ್‌ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಅನಾಹುತವೊಂದು ನಡೆದಿದೆ. ಜಾತ್ರೆಗೆ ಬರುತ್ತಿದ್ದ ರಾಯಸಂದ್ರ ಗ್ರಾಮದ ತೇರು ಉರುಳಿ ಬಿದಿದ್ದೆ. ಈ ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ.

ತೇರು ಬೀಳುತ್ತಿರುವ ದೃಶ್ಯ ಸೆರೆಯಾಗಿದ್ದು, ವಿಡಿಯೊ ವೈರಲ್ ಆಗುತ್ತಿದೆ. ಜಾತ್ರೆಗೆ ತೇರು ಎಳೆದು ತರುವ ವೇಳೆ ಈ ಅವಘಢ ಸಂಭವಿಸಿದೆ. 150 ಅಡಿ ಎತ್ತರದ ತೇರು ಇದಾಗಿದೆ. ತೇರಿನ ಅಡಿಗೆ ಸಿಲುಕಿದೆ ವ್ಯಕ್ತಿಗೆ ಗಂಭೀರ ಗಾಯವಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನೇಕಲ್‌ನ ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ವಿವಿಧ ಊರುಗಳಿಂದ ತೇರುಗಳು ಬರುತ್ತವೆ. ಇಂದು ಕೂಡ ತೇರಿನ ಸಂಭ್ರಮ ಕಳೆಗಟ್ಟಿತ್ತು. ಆದರೆ ಸಂಜೆ ವೇಳೆ ಗಾಳಿ, ಮಳೆ ಶುರುವಾಗಿತ್ತು. ಇದರಿಂದಾಗಿ ದೊಡ್ಡ ನಾಗಮಂಗಲ ಮತ್ತು ರಾಯಸಂದ್ರದ ಖುರ್ಚು (ತೇರು) ನೆಲಕ್ಕುರುಳಿದೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.

ಕಳೆ...