ಭಾರತ, ಮೇ 26 -- ಕಾಮಿಡಿ ಕಿಲಾಡಿಗಳು ಶೋ ಮೂಲಕ ನಾಡಿನಾದ್ಯಂತ ಗುರುತಿಸಿಕೊಂಡಿದ್ದ ನಟ ಮಡೆನೂರು ಮನು, ಇದೀಗ ಅತ್ಯಾಚಾರ ಮತ್ತು ಬಲವಂತದ ಗರ್ಭಪಾತದ ಆರೋಪದಡಿಯಲ್ಲಿ ಜೈಲು ಸೇರಿದ್ದಾರೆ. ಸೋಮವಾರ ವಿಚಾರಣೆಗೆಂದು 3ನೇ ಎಸಿಜೆಎಂ ಕೋರ್ಟ್‌ಗೆ ಹಾಜರಾದ ಮಡೆನೂರು ಮನುಗೆ, ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನದ ಆದೇಶ ನೀಡಿದೆ.

2022ರಲ್ಲಿ ಹಾಸ್ಯ ಕಾರ್ಯಕ್ರಮದ ನಿಮಿತ್ತ ಶಿವಮೊಗ್ಗದ ಶಿಕಾರಿಪುರಕ್ಕೆ ತೆರಳಿದ್ದಾಗ, ಮಡೆನೂರು ಮನು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅದಾದ ಬಳಿಕ ಹಲವು ಸಲ ಬಲಾತ್ಕಾರ ಮಾಡಿ, ಗರ್ಭಪಾತವನ್ನೂ ಮಾಡಿಸಿದ್ದಾನೆ ಎಂದು ಸಂತ್ರಸ್ತೆ ನೀಡಿದ್ದ ದೂರಿನ ಮೇಲೆ ಮನು ಅವರ ಬಂಧನವಾಗಿದೆ.

ಇದನ್ನೂ ಓದಿ: ಅಣ್ಣಾವ್ರ ಸಾವಿನ ರಹಸ್ಯ! ಒಂದಲ್ಲ, ಎರಡು ಸಲ ತಾವೇ ಸಾಯುವ ನಿರ್ಧಾರ ಮಾಡಿದ್ದರು ಡಾ ರಾಜ್‌ಕುಮಾರ್

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ಮೇ 22ರಂದು ಮಡೆನೂರು ಮನುರನ್ನು ಬಂಧಿಸಿದ್ದರು. ಇದೀಗ ಮಗದೊಮ್ಮೆ ವಿಚಾರಣೆಗೆ ಹಾಜರಾದ ವೇಳೆ ಆರೋ...