ಭಾರತ, ಮೇ 3 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 190ನೇ ಎಪಿಸೋಡ್‌ ಕಥೆ ಹೀಗಿದೆ. ಗೋಡಂಬಿ ಮೇಲೆ ಹಲ್ಲೆ ಮಾಡಲು ಬಂದ ಪರಶುವನ್ನು ಜಿಮ್‌ ಸೀನ ಹಾಗೂ ರಶ್ಮಿ ಹೊಡೆದು ಓಡಿಸುತ್ತಾರೆ. ಶಿವಣ್ಣನಿಗೆ ಈ ವಿಚಾರ ಗೊತ್ತಾದರೆ ಅವನು ಬೇಸರ ಮಾಡಿಕೊಳ್ಳುತ್ತಾನೆ ಎಂದು ಸೀನ ಆ ವಿಚಾರವನ್ನು ಮುಚ್ಚಿಡುತ್ತಾನೆ. ರಾಣಿ ಮಾಡಿ ಕಳಿಸಿದ ತಿಂಡಿಯನ್ನು ರಶ್ಮಿ ತಿಂದು ಖುಷಿ ಪಡುತ್ತಾಳೆ.

ಡಾಕ್ಟರ್‌ ಬಳಿ ಮಾತನಾಡಿಕೊಂಡು ಶಿವಣ್ಣ ಮತ್ತೆ ವಾರ್ಡ್‌ ಬಳಿ ಬರುತ್ತಾನೆ. ಗೋಡಂಬಿಯನ್ನು ಮಾತನಾಡಿಸಿ ಎದ್ದೇಳು ಗೋಡಂಬಿ, ಅಂಗಡಿ ಬಾಗಿಲು ತೆಗೆಯಬೇಕು ತಡವಾಯ್ತು ಎನ್ನುತ್ತಾನೆ. ಈ ರೀತಿ ಏಕೆ ಮಾತನಾಡುತ್ತೀಯ ಶಿವಣ್ಣ ಎಂದು ಸೀನ ಕೇಳುತ್ತಾನೆ, ಗೋಡಂಬಿಯನ್ನು ಆಗ್ಗಾಗ್ಗೆ ಈ ರೀತಿ ಮಾತನಾಡಿಸಿದರೆ ಅವನು ಬೇಗ ಗುಣಮುಖನಾಗುತ್ತಾನೆ ಎಂದು ಡಾಕ್ಟರ್‌ ಹೇಳಿರುವುದಾಗಿ ಶಿವಣ್ಣ ಹೇಳುತ್ತಾನೆ. ಅಷ್ಟರಲ್ಲಿ ಶಿವಣ್ಣನನ್ನು ಹುಡುಕಿಕೊಂಡು ಕಾನ್ಸ್‌ಟೆಬಲ್‌ ಬರುತ್ತಾರೆ. ಅದೇ ಸಮಯಕ್ಕೆ ಪ...