Bangalore, ಏಪ್ರಿಲ್ 29 -- ಅಣ್ಣಯ್ಯ ಧಾರಾವಾಹಿ: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 185ನೇ ಎಪಿಸೋಡ್ ಕಥೆ ಹೀಗಿದೆ. ಗೋಡಂಬಿ ಬದುಕಿರುವ ವಿಚಾರ ತಿಳಿದು ಪರಶು, ವೀರಭದ್ರ ಗಾಬರಿಯಾಗುತ್ತಾರೆ. ಶಿವು ಹಾಗೂ ಪಾರ್ವತಿ ಗೋಡಂಬಿಯನ್ನು ಆಸ್ಪತ್ರೆಗೆ ಸೇರಿಸಲು ಕರೆದೊಯ್ಯುವಾಗ ಸೋಮ ಕಳಿಸಿದ ರೌಡಿಗಳು ಅವರ ಮೇಲೆ ಹಲ್ಲೆ ಮಾಡಲು ಯತ್ನಿಸುತ್ತಾರೆ. ಅಷ್ಟರಲ್ಲಿ ಪಾರ್ವತಿ ಜೆಸಿಬಿ ಹತ್ತಿ ಕಲ್ಲುಗಳನ್ನು ತೆಗೆಯುತ್ತಾಳೆ. ಅವಳನ್ನು ನೋಡಿ ರೌಡಿಗಳು ಹೆದರಿ ಓಡಿ ಹೋಗುತ್ತಾರೆ.
ನಗರದ ಆಸ್ಪತ್ರೆಯೊಂದಕ್ಕೆ ಶಿವು-ಪಾರ್ವತಿ ಗೋಡಂಬಿಯನ್ನು ಕರೆದೊಯ್ಯುತ್ತಾನೆ. ಡ್ಯೂಟಿ ಡಾಕ್ಟರ್ ಇಲ್ಲದ ಕಾರಣ ಮ್ಯಾನೇಜ್ಮೆಂಟ್ ಅನುಮತಿ ಪಡೆದು ಸ್ವತಃ ಪಾರ್ವತಿಯೇ ಗೋಡಂಬಿಗೆ ಚಿಕಿತ್ಸೆ ಮಾಡುತ್ತಾಳೆ. ಅಷ್ಟರಲ್ಲಿ ಡ್ಯೂಟಿ ಡಾಕ್ಟರ್ ಬರುತ್ತಾರೆ. ನೀವು ಚಿಕಿತ್ಸೆ ಕೊಟ್ಟು ಒಳ್ಳೆ ಕೆಲಸ ಮಾಡಿದ್ದೀರಿ. ನಿಮ್ಮಂಥ ಡಾಕ್ಟರ್ ವೈದ್ಯಕೀಯ ಕ್ಷೇತ್ರಕ್ಕೆ ಬಹಳ ಅವಶ್ಯಕತೆ ಇದೆ ಎಂದು ಹೊ...
Click here to read full article from source
To read the full article or to get the complete feed from this publication, please
Contact Us.