Bangalore, ಮೇ 23 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 205ನೇ ಎಪಿಸೋಡ್‌ ಕಥೆ ಹೀಗಿದೆ. ಲೈಸನ್ಸ್‌ ವಿಚಾರಕ್ಕೆ ಬೇಸರಗೊಂಡಿದ್ದ ಪಾರ್ವತಿಯನ್ನು ಶಿವು ಸಮಾಧಾನ ಮಾಡುತ್ತಾನೆ. ತಾನು ಊಟ ಮಾಡದಿದ್ದಕ್ಕೆ ನಾದಿನಿಯರು ಕೂಡಾ ಉಪವಾಸ ಇದ್ದಾರೆ ಎಂದು ತಿಳಿದು ಪಾರ್ವತಿ ಬೇಸರ ಮರೆತು ಎಲ್ಲರೊಂದಿಗೆ ಊಟಕ್ಕೆ ಕೂರುತ್ತಾಳೆ. ಇತ್ತ ಮನೆಯಲ್ಲಿ ಮಾದಪ್ಪಣ್ಣ ಇಲ್ಲದ್ದಕ್ಕೆ ಸೀನ ಮಲಗಲು ತೋಟಕ್ಕೆ ಹೋಗುತ್ತಾನೆ. ತೋಟಕ್ಕೆ ಬೇಡ ಇಲ್ಲೇ ಹೊರಗೆ ಮಲಗು ಎಂದು ಲೀಲಾ ಹೇಳುತ್ತಾಳೆ. ಬೆಳಗ್ಗೆ ಎದ್ದು ನೋಡಿದಾಗ ರಶ್ಮಿ ಹಾಗೂ ಸೀನ ಒಟ್ಟಿಗೆ ಮಲಗಿರುವುದನ್ನು ನೋಡಿ ಲೀಲಾ ಸಿಟ್ಟಾಗುತ್ತಾಳೆ.

ಅಂಗಡಿ ಕೆಲಸದ ಮೇಲೆ ಶಿವು ಹಾಗೂ ಗೊರಕೆ ಸಿಟಿಗೆ ಹೋಗುತ್ತಾರೆ. ಪಾರ್ವತಿ ಹಾಗೂ ರಾಣಿ ಇಬ್ಬರೇ ಅಂಗಡಿಗೆ ಹೊರಡುತ್ತಾರೆ. ಅವರಿಬ್ಬರಿಗೂ ರತ್ನ ನೀರಿನ ಬಾಟಲ್‌, ಸ್ನಾಕ್ಸ್‌ ರೆಡಿ ಮಾಡಿಕೊಡುತ್ತಾಳೆ. ಅಂಗಡಿಗೆ ಹೋಗುವ ಪಾರ್ವತಿ, ಇಂದು ಚೆನ್ನಾಗಿ ವ್ಯಾಪಾರ ಆಗುವಂತೆ ಮಾಡು, ಮಾವ ಬ...